alex Certify ಯುದ್ಧ ಪೀಡಿತ ದೇಶದಲ್ಲಿ ಅಗತ್ಯವಿರುವವರಿಗೆ ಆಹಾರ ತಲುಪಿಸುವ ಪಿಜ್ಜೇರಿಯಾ ಮಾಲೀಕ: ನೆಟ್ಟಿಗರಿಂದ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುದ್ಧ ಪೀಡಿತ ದೇಶದಲ್ಲಿ ಅಗತ್ಯವಿರುವವರಿಗೆ ಆಹಾರ ತಲುಪಿಸುವ ಪಿಜ್ಜೇರಿಯಾ ಮಾಲೀಕ: ನೆಟ್ಟಿಗರಿಂದ ಶ್ಲಾಘನೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಿಸಿದಾಗಿನಿಂದ ಉಕ್ರೇನ್‌ನಲ್ಲಿ ಪರಿಸ್ಥಿತಿ ಹದಗೆಡುತ್ತಲೇ ಇದೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು, ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ನಗರಗಳು ಯುದ್ಧದಿಂದಾಗಿ ಇನ್ನಿಲ್ಲವಾಗಿದೆ. ಈ ನಡುವೆ ಜನರು ಪರಸ್ಪರ ಸಹಾಯ ಮಾಡುತ್ತಿರುವ ಪ್ರಕರಣಗಳು ಕೂಡ ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ.

ಖಾರ್ಕಿವ್‌ನ ಪಿಜ್ಜೇರಿಯಾ ಮಾಲೀಕರೊಬ್ಬರು ವೈದ್ಯರು, ತುರ್ತು ಸಿಬ್ಬಂದಿ ಮತ್ತು ಸಾಮಾನ್ಯ ಜನರಿಗೆ ಆಹಾರ ಪೂರೈಸುತ್ತಿದ್ದಾರೆ. ಈ ವಿಡಿಯೋವನ್ನು ಹನ್ನಾ ಲಿಯುಬಕೋವಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಖಂಡಿತವಾಗಿಯೂ ನಿಮ್ಮ ಹೃದಯವನ್ನು ಗೆಲ್ಲೋದ್ರಲ್ಲಿ ಸಂಶಯವೇ ಇಲ್ಲ. ಪಾವ್ಲೋದ ಖಾರ್ಕಿವ್‌ನಲ್ಲಿರುವ ಪಿಜ್ಜೇರಿಯಾದ ಮಾಲೀಕರು ಸ್ವತಃ ನಗರದಾದ್ಯಂತ ಸಂಚರಿಸಿ ಪಿಜ್ಜಾ ವಿತರಿಸುತ್ತಾರೆ. ವಿದೇಶದಿಂದ ಕರೆ ಮಾಡುವ ಜನರು, ವೈದ್ಯರು, ತುರ್ತು ಸಿಬ್ಬಂದಿ ಮತ್ತು ಸಾಮಾನ್ಯ ಜನರಿಗೆ ಕೊಡಲಾಗುವ ಆಹಾರಕ್ಕಾಗಿ ಹಣವನ್ನು ಪಾವತಿಸುತ್ತಾರೆ.

ಈ ಹೃದಯಸ್ಪರ್ಶಿ ವಿಡಿಯೋ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಪಾವ್ಲೋ ಅವರ ಕಾರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಜೊತೆಗೆ ಕೊಡುಗೆ ನೀಡಲು ಹಣವನ್ನು ಕಳುಹಿಸುವ ಪ್ರಕ್ರಿಯೆಯ ಬಗ್ಗೆ ಇತರರು ವಿಚಾರಿಸಿದ್ದಾರೆ.

— Hanna Liubakova (@HannaLiubakova) April 12, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...