alex Certify ಮುಸ್ಲಿಂ ಯುವಕನನ್ನು ಮದುವೆಯಾಗುವ ಕುಟುಂಬ ಬಹಿಷ್ಕರಿಸಿ; ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಸ್ಲಿಂ ಯುವಕನನ್ನು ಮದುವೆಯಾಗುವ ಕುಟುಂಬ ಬಹಿಷ್ಕರಿಸಿ; ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪತ್ರ

ಹುಬ್ಬಳ್ಳಿ: ಮುಸ್ಲಿಂ ರ ಜತೆ ಮದುವೆಯಾಗುವ ಎಸ್ ಎಸ್ ಕೆ ಸಮಾಜದ ಕುಟುಂಬದವರನ್ನು ಬಹಿಷ್ಕರಿಸುವಂತೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಸರ್ಕಾರದ ಲೆಟರ್ ಹೆಡ್ ನಲ್ಲಿ ಎಸ್ ಎಸ್ ಕೆ ಸಮಾಜದ ಧರ್ಮದರ್ಶಿಗಳಿಗೆ ಪತ್ರ ಬರೆದಿರುವುದು ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಇದೇ ಸಮಾಜದ ಯುವತಿ ಮುಸ್ಲಿಂ ಯುವಕನ ಜತೆ ರಿಜಿಸ್ಟ್ರಾರ್ ವಿವಾಹವಾಗಿದ್ದಳು. ಇದರ ಬೆನ್ನಲ್ಲೇ ಲವ್ ಜಿಹಾದ್ ಆರೋಪ ಕೇಳಿ ಬಂದಿತ್ತು. ಆದರೆ ಯುವತಿ ತಾನೇ ಇಷ್ಟಪಟ್ಟು ವಿವಾಹವಾಗಿದ್ದಾಗಿ ಹೇಳಿದ್ದಳು. ಇದೀಗ ಯುವತಿ ಕುಟುಂಬದವರನ್ನು ಸಮಾಜದ ಹಿತದೃಷ್ಟಿಯಿಂದ ಬಹಿಷ್ಕಾರ ಮಾಡುವಂತೆ ನಾಗೇಶ್ ಪತ್ರ ಬರೆದಿದ್ದಾರೆ.

ತಮ್ಮ ಸಮಾಜದ ಯಾರೇ ಮುಸ್ಲಿಂರನ್ನು ವಿವಾಹವಾದರೆ ಅಂತಹ ಕುಟುಂಬದವರನ್ನು ಸಮಾಜದಿಂದ ಹೊರಗಿಡಬೇಕು. ದೇವಸ್ಥಾನ ಪ್ರವೇಶ ನಿಷೇಧ ಮಾಡಬೇಕು. ಅಂತಹ ಕುಟುಂಬಕ್ಕೆ ಯಾರೂ ಕೂಡ ಹೆಣ್ಣು ಕೊಡಬಾರದು, ಸಮಾಜದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...