alex Certify ಮಾರ್ಚ್​ 16ರಂದು ಭಗವಂತ್​ ಮಾನ್​ ಪ್ರಮಾಣ ವಚನ ಸ್ವೀಕಾರ: ಗೋವಾ ಸಿಎಂ ಆಗಿ ಸಾವಂತ್​ ಮುಂದುವರಿಕೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್​ 16ರಂದು ಭಗವಂತ್​ ಮಾನ್​ ಪ್ರಮಾಣ ವಚನ ಸ್ವೀಕಾರ: ಗೋವಾ ಸಿಎಂ ಆಗಿ ಸಾವಂತ್​ ಮುಂದುವರಿಕೆ ಸಾಧ್ಯತೆ

ಆಮ್​ ಆದ್ಮಿ ಪಕ್ಷದ ಭಗವಂತ್​ ಮಾನ್​​ ಮಾರ್ಚ್​ 16ರಂದು ಖಟ್ಕರ್​ ಕಲಾನ್​ನಲ್ಲಿ ಪಂಜಾಬ್​ನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಪಂಜಾಬ್​ನ ಸಿಎಂ ಅಭ್ಯರ್ಥಿ ಭಗವಂತ್​ ಮಾನ್​, ಇಂದು ನಾನು ರಾಜ್ಯಪಾಲರನ್ನು ಭೇಟಿ ಮಾಡಿದ್ದೇನೆ. ಮಾರ್ಚ್​ 16ರ ಮಧ್ಯಾಹ್ನ 12:30ಕ್ಕೆ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದೇನೆ. ನಾನು ಖಟ್ಕರ್​ ಕಲಾನ್​ನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ನಾವು ಮತ್ತೆ ಮೊದಲಿನ ಪಂಜಾಬ್​ನ್ನು ನಿರ್ಮಿಸುತ್ತೇವೆ ಎಂದು ಹೇಳಿದ್ದಾರೆ.

ಖಟ್ಕರ್​ ಕಲಾನ್​ನಲ್ಲಿರುವ ಶಹೀದ್​ ಭಗತ್​ ಸಿಂಗ್​ರ ಮನೆಯಲ್ಲಿ ನಾವು ಸಮಾರಂಭವನ್ನು ಆಯೋಜಿಸಲಿದ್ದೇವೆ. ರಾಜ್ಯದೆಲ್ಲೆಡೆಯಿಂದ ಪಂಜಾಬಿಗಳು ಆಗಮಿಸಲಿದ್ದಾರೆ ಎಂದು ಮಾನ್​ ಹೇಳಿದರು.

ಇತ್ತ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಗೋವಾದ ಮುಖ್ಯಮಂತ್ರಿಯಾಗಿ ಪ್ರಮೋದ್​ ಸಾವಂತ್​ರೇ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಗೋವಾದಲ್ಲೂ ಕೂಡ ಸರ್ಕಾರವನ್ನು ರಚಿಸಲು ಬಿಜೆಪಿಯು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ತಿದೆ. ಇನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹೋಳಿ ಹಬ್ಬದ ದಿನದಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...