alex Certify ಭೀಮಾ ತೀರದ ರಕ್ತಸಿಕ್ತ ಅಧ್ಯಾಯಕ್ಕೆ ಪೂರ್ಣವಿರಾಮ; ಭೈರಗೊಂಡ – ಚಡಚಣ ಕುಟುಂಬದ ನಡುವೆ ರಾಜಿ ಸಂಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೀಮಾ ತೀರದ ರಕ್ತಸಿಕ್ತ ಅಧ್ಯಾಯಕ್ಕೆ ಪೂರ್ಣವಿರಾಮ; ಭೈರಗೊಂಡ – ಚಡಚಣ ಕುಟುಂಬದ ನಡುವೆ ರಾಜಿ ಸಂಧಾನ

ಭೀಮಾ ತೀರದಲ್ಲಿ ಕಳೆದ ಐದು ದಶಕಗಳಿಂದ ನಡೆದುಕೊಂಡು ಬಂದಿದ್ದ ದ್ವೇಷಪೂರಿತ ವಾತಾವರಣಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಅಂತ್ಯ ಹಾಡಿದ್ದಾರೆ. ಬೈರಗೊಂಡ ಹಾಗೂ ಚಡಚಣ ಕುಟುಂಬದ ನಡುವೆ ರಾಜಿ ಸಂಧಾನ ನಡೆಸಿದ್ದು, ಈ ಮೂಲಕ 5 ದಶಕಗಳ ರಕ್ತಸಿಕ್ತ ಅಧ್ಯಾಯಕ್ಕೆ ಪೂರ್ಣ ವಿರಾಮ ಬಿದ್ದಂತಾಗಿದೆ.

ಭೀಮಾ ತೀರದ ಚಡಚಣ ತಾಲೂಕಿನ ಉಮರಾಣಿಯ ಮಹಾದೇವ ಭೈರಗೊಂಡ ಹಾಗೂ ಮಲ್ಲಿಕಾರ್ಜುನ ಚಡಚಣ ಕುಟುಂಬಗಳ ನಡುವೆ ದಶಕಗಳಿಂದ ಪರಸ್ಪರ ದ್ವೇಷವಿದ್ದು, ಇದರಿಂದಾಗಿ ಹತ್ತಾರು ಕೊಲೆಗಳು ನಡೆದಿದ್ದವು. ಈಗ ಎಡಿಜಿಪಿ ಅಲೋಕ್ ಕುಮಾರ್ ಪ್ರಯತ್ನದಿಂದಾಗಿ ಶಾಂತಿ ನೆಲೆಸುವಂತಾಗಿದೆ.

ಬುಧವಾರದಂದು ಚಡಚಣದಲ್ಲಿ ಶಾಂತಿ ಸಭೆ ಕರೆದಿದ್ದ ಎಡಿಜಿಪಿ ಅಲೋಕ್ ಕುಮಾರ್, ಮಹಾದೇವ ಭೈರಗೊಂಡ ಹಾಗೂ ವಿಮಲಾ ಬಾಯಿ ಚಡಚಣ ನಡುವೆ ಸಂಧಾನ ನಡೆಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಯಾವುದೇ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ತಾಕೀತು ಮಾಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...