alex Certify ಬ್ಯಾಂಕ್ ದೋಚಿದ್ದ ಐಟಿ ಉದ್ಯೋಗಿ ಅಂದರ್…!‌ ಬೆಚ್ಚಿಬೀಳಿಸುವಂತಿದೆ ಕೃತ್ಯಕ್ಕೂ ಮುನ್ನ ಈತ ಮಾಡಿದ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ದೋಚಿದ್ದ ಐಟಿ ಉದ್ಯೋಗಿ ಅಂದರ್…!‌ ಬೆಚ್ಚಿಬೀಳಿಸುವಂತಿದೆ ಕೃತ್ಯಕ್ಕೂ ಮುನ್ನ ಈತ ಮಾಡಿದ ಪ್ಲಾನ್

ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎಸ್.ಬಿ.ಐ. ಬ್ಯಾಂಕ್ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐಟಿ ಉದ್ಯೋಗಿಯೊಬ್ಬನನ್ನ ಬಂಧಿಸಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ 28 ವರ್ಷದ ಧೀರಜ್ ಬಂಧಿತ ಆರೋಪಿ. ಜನವರಿ 14ರಂದು ಬಿಟಿಎಂ ಲೇಔಟ್ನ ಎಸ್.ಬಿ.ಐ. ಬ್ಯಾಂಕ್ ಗೆ ನುಗ್ಗಿ‌, ಸಿಬ್ಬಂದಿಗೆ ಚಾಕು ತೋರಿಸಿ 3.75 ಲಕ್ಷ ನಗದು ಹಾಗೂ 1.8ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ಮಾಡಲು ಹೋಗಿ ಸಾಲದ ಸುಳಿಗೆ ಸಿಲುಕಿದ್ದ ಧೀರಜ್, ಸಾಲಗಾರರ ಕಾಟದಿಂದ‌ ಬೇಸತ್ತು ಬ್ಯಾಂಕ್ ದರೋಡೆ ಮಾಡಿದ್ದಾನೆ. ಈ ಮೊದಲು, ಬ್ಯಾಂಕ್ ಗಳಲ್ಲಿ ಲೋನ್ ಪಡೆದು ಯುಎಸ್ ಮೂಲದ OYLMP ಎಂಬ ಆನ್‌ಲೈನ್ ಟ್ರೇಡಿಂಗ್ ನಲ್ಲಿ‌ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದ ಈತ ಸಾಲ ತೀರಿಸಲು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್ ದರೋಡೆಗೆ ಪ್ಲಾನ್ ಮಾಡಿದ್ದೇಗೆ..?

ಸಾಲಗಾರರ ಕಾಟ ತಾಳಲಾರದೆ ಇದಕ್ಕೆ ಸಲ್ಯೂಷನ್ ಹುಡುಕ್ತಿದ್ದ ಧೀರಜ್ ಗೆ, ನ್ಯೂಸ್ ಪೇಪರ್ ನಲ್ಲಿ ಬಂದಿದ್ದ ಬ್ಯಾಂಕ್ ರಾಬರಿ ಸುದ್ದಿ ಸಿಕ್ಕಿದೆ. ಇದನ್ನ ನೋಡಿ ತಾನು ಬ್ಯಾಂಕ್ ದರೋಡೆ ಮಾಡಲು ಪ್ಲಾನ್ ಮಾಡಿದ್ದಾನೆ. ಒಬ್ಬನೇ ಬ್ಯಾಂಕ್ ದರೋಡೆ ಮಾಡುವುದು ಹೇಗೆ ಎಂದು ಗೂಗಲ್ ನಲ್ಲಿ ಮತ್ತು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದ್ದಾನೆ.

ಇಡೀ ಬೆಂಗಳೂರಲ್ಲಿ ಸೆಕ್ಯೂರಿಟಿ ಇಲ್ಲದ ಬ್ಯಾಂಕ್ ಗಳನ್ನ ಸರ್ಚ್ ಮಾಡಿದ್ದಾನೆ. ಬಳಿಕ ಬಿಟಿಎಂ ಲೇಔಟ್ ನಲ್ಲಿ ಸೆಕ್ಯೂರಿಟಿ ಇಲ್ಲದ್ದನ್ನ ಗಮನಿಸಿ ಮೂರು ದಿನಗಳ ಕಾಲ ಹೊಂಚು ಹಾಕಿ, ಜನವರಿ 14ನೇ ತಾರೀಖಿನಂದು ದರೋಡೆ ಮಾಡಿದ್ದಾನೆ. ಇಡೀ ದಿನ‌ ಬ್ಯಾಂಕ್ ಬಿಲ್ಡಿಂಗ್ ಮೇಲೆಯೇ ಇದ್ದು, ಬ್ಯಾಂಕ್ ನಲ್ಲಿ ಇಬ್ಬರು ಸಿಬ್ಬಂದಿಗಳಿದ್ದ ಸಂದರ್ಭದಲ್ಲಿ ಚಾಕು ಹಿಡಿದು ಒಳಗೆ ನುಗ್ಗಿದ್ದಾನೆ.‌ ಬ್ಯಾಂಕ್ ನಲ್ಲಿದ್ದ ಮ್ಯಾನೇಜರ್ ಹಾಗೂ ಮಹಿಳಾ ಸಿಬ್ಬಂದಿಯನ್ನ ಬೆದರಿಸಿ ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು, ಪೊಲೀಸರ ದಾರಿ ತಪ್ಪಿಸಲು ಬ್ಯಾಂಕ್ ಸಮೀಪವೇ ಸುತ್ತಾಡಿ, ನಂತರ ಬ್ಯಾಂಕ್ ಬಳಿಯೇ ಆಟೋ ಹತ್ತಿ ಎಸ್ಕೇಪ್ ಆಗಿದ್ದಾನೆ.

ದರೋಡೆ ಬಳಿಕ ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ, ಅನಂತಪುರಂ ಸುತ್ತಾಡಿ ಮತ್ತೆ ಬೆಂಗಳೂರಿಗೆ ವಾಪಸ್ ಬಂದ ಧೀರಜ್, ಸಾಲಗಾರರೆಲ್ಲರಿಗೂ ಹಣ ಹಿಂತಿರುಗಿಸಿದ್ದಾನೆ.‌ ಇದೇ ವೇಳೆ ಮತ್ತೊಬ್ಬರಿಗೆ ಸಾಲ ಕೊಡಲು ಬಂದಾಗ ಈತನನ್ನ ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ‌.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...