alex Certify ಬಿಟ್ ಕಾಯಿನ್ ಅಂದ್ರೆ ಏನಂತಾನೇ ನಮಗೆ ಗೊತ್ತಿಲ್ಲ; ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಟ್ ಕಾಯಿನ್ ಅಂದ್ರೆ ಏನಂತಾನೇ ನಮಗೆ ಗೊತ್ತಿಲ್ಲ; ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿಕೆ

ಬೆಂಗಳೂರು: ಬಿಟ್ ಕಾಯಿನ್ ಬಗ್ಗೆ ನನಗೇನೂ ಗೊತ್ತಿಲ್ಲ. ಬಿಟ್ ಕಾಯಿ ಅಂದ್ರೆ ಏನೆಂಬುದೇ ನನಗಾಗಲಿ, ನನ್ನ ಮಗ ದರ್ಶನ್ ಲಮಾಣಿಗಾಗಲಿ ಗೊತ್ತಿಲ್ಲ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.

ಯಾರೋ ಒಬ್ಬ ದರೋಡೆಕೋರ ಬಂದು ನಮ್ಮೊಂದಿಗೆ ಫೋಟೋ ತೆಗೆಸಿಕೊಳ್ತಾನೆ. ಆತ ಮಾಡುವ ತಪ್ಪಿಗೆ ಸಿಕ್ಕಿಹಾಕಿಕೊಂಡಾಗ ಲಮಾಣಿ ಆಪ್ತ ಎಂದು ಹೇಳುತ್ತಾರೆ. ಬಿಟ್ ಕಾಯಿನ್ ವಿಚಾರವಾಗಲಿ, ಅಥವಾ ಬೇರೆ ಯಾವುದೇ ವಿಚಾರದ ಬಗ್ಗೆ ನಮಗೆ ಗೊತ್ತಿಲ್ಲ. ನನ್ನ ಮಗ ದರ್ಶನ್ ಲಮಾಣಿ ಈಗ ರಾಣೆಬೆನ್ನೂರಿನಲ್ಲಿ ಕ್ರಷರ್, ಮೈನ್ಸ್, ತೋಟ ನೋಡಿಕೊಳ್ಳುತ್ತಿದ್ದಾನೆ ಎಂದು ಹೇಳಿದರು.

ಡ್ರಗ್ಸ್ ಕೇಸ್ ವಿಚಾರವಾಗಿ ಮಾತನಾಡಿದ ರುದ್ರಪ್ಪ ಲಮಾಣಿ, ಪೊಲೀಸರು ನಮ್ಮನ್ನು ಸಂಪರ್ಕಿಸಿಲ್ಲ. ಕಾನೂನಿಗೆ ನಾವು ಗೌರವ ಕೊಡುತ್ತೇವೆ. 2020ರಲ್ಲಿ ಮಾದಕ ದ್ರವ್ಯದ ಬಗ್ಗೆ ಕೇಸ್ ಆಗಿತ್ತು. ಯಾರೋ ಒಬ್ಬ ನಮ್ಮ ಮಗ ದರ್ಶನ್ ನನ್ನು ಗೋವಾಕ್ಕೆ ಕರೆದೊಯ್ದಿದ್ದರು. ಆಗ ದರ್ಶನ್ ಅರೆಸ್ಟ್ ಆಗಿದ್ದ. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಸ್ನೇಹಿತ ಎಂದ ಮಾತ್ರಕ್ಕೆ ಆರೋಪಿಗಳಾಗಲ್ಲ. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು ಬಿಟ್ಟರೆ ಬೇರೆ ಯಾವ ವಿಚಾರದ ಬಗ್ಗೆಯೂ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...