alex Certify ಬಜರಂಗದಳ ಕಾರ್ಯಕರ್ತನ ಮರ್ಡರ್ ಮಿಸ್ಟರಿ; ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಹರ್ಷನ ಸ್ನೇಹಿತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಜರಂಗದಳ ಕಾರ್ಯಕರ್ತನ ಮರ್ಡರ್ ಮಿಸ್ಟರಿ; ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಹರ್ಷನ ಸ್ನೇಹಿತರು

ಹರ್ಷನ ಕೊಲೆ ವಿಚಾರ ದಿನದಿಂದ ದಿನಕ್ಕೆ ಮತ್ತಷ್ಟು ಸ್ಪೋಟಕ ತಿರುವು ಪಡೆದುಕೊಳ್ಳುತ್ತಿದೆ. ಬಂಧನವಾಗಿರೊ ಆರೋಪಿಗಳ ಹಿಸ್ಟರಿ ನೋಡಿದಾಗ ಗ್ಯಾಂಗ್ ರೈವಲರಿ ಕಾರಣ ಅಂತಾ ಮೇಲ್ನೊಟಕ್ಕೆ ಕಾಣಿಸುತ್ತಿದೆ. ಈ ಸಂದರ್ಭದಲ್ಲಿ ಹರ್ಷನ ಸ್ನೇಹಿತರು ನೀಡಿರುವ ಹೇಳಿಕೆಗಳು, ಇಡೀ ಘಟನೆ ಹೇಗೆ ನಡೆಯಿತು ಎಂಬ ಸ್ಪೋಟಕ ಸತ್ಯಗಳನ್ನ ಬಿಚ್ಚಿಟ್ಟಿದೆ.

ಹರ್ಷನ ಕೊಲೆಗೂ ಮುನ್ನ, ಆತನಿಗೆ ಸಂಜೆ ಸುಮಾರಿಗೆ ಹಲವು ಅನಾಮಧೇಯ ವಿಡಿಯೋ ಕರೆಗಳು ಬಂದಿವೆ. ಒಂದಲ್ಲಾ, ಎರಡಲ್ಲಾ ಪದೇ ಪದೇ ಹುಡುಗಿಯರಿಬ್ಬರು ಆತನಿಗೆ ಕರೆ ಮಾಡಿ ಸಹಾಯ ಕೇಳಿದ್ದಾರೆಂದು ಅಂದು ಆತನ ಜೊತೆಗಿದ್ದ ಸ್ನೇಹಿತರು ತಿಳಿಸಿದ್ದಾರೆ.

ಹರ್ಷ ಕರೆಗಳನ್ನ ಒಂದೆರಡು ಬಾರಿ ರಿಸೀವ್ ಮಾಡಿದಾಗ ಹುಡುಗಿಯರಿಬ್ಬರು ಸಹಾಯ ಕೋರಿದ್ದಾರೆ. ನನ್ನಿಂದ ಏನು ಸಹಾಯ ಬೇಕು ಎಂದು ಕೇಳಿದ್ದ ಹರ್ಷ, ಆ ಹುಡುಗಿಯರನ್ನು ನೀವ್ಯಾರು ಎಂದು ಕೇಳಿದಾಗ ನಿಮ್ಮ ಸ್ನೇಹಿತೆ ಎಂದು ಉತ್ತರಿಸಿದ್ದರಂತೆ. ಇದಾದ ನಂತರ ಕರೆ ಕಟ್ ಮಾಡಿದ ನಂತರವೂ ಪದೇ ಪದೇ ಕರೆ ಮಾಡಿದ್ದರು.

ತ್ರಿಭಜನೆಯಾದ್ರೂ ಕಡಿಮೆಯಾಗದ ಕಿತ್ತಾಟ; ಕಟ್ಟಡದ ವಿಚಾರಕ್ಕೆ ನಗರ ಹಾಗೂ ಉತ್ತರ ವಿವಿ ಕಾದಾಟ

ಹರ್ಷನನ್ನು ಒಬ್ಬ ವ್ಯಕ್ತಿ ವಾಚ್ ಮಾಡುತ್ತಿದ್ದ. ಕಳೆದೆರಡು ವಾರದಿಂದ ಅವನು ಹರ್ಷನನ್ನು ಹಿಂಬಾಲಿಸುತ್ತಿದ್ದ ಎಂಬ ಅನುಮಾನ ಇತ್ತು. ಅವನನ್ನು ಅರೆಸ್ಟ್ ಮಾಡಿಲ್ಲ.‌ ಮಟನ್ ಸ್ಟಾಲ್ ಬಳಿಯು ಮೂರು ಜನ ಕುಳಿತಿದ್ದರು, ಅವನು ಜೊತೆಯಲ್ಲಿ ಕುಳಿತುಕೊಂಡಿದ್ದ. ನಾವು ಭಾರತಿ ಕಾಲೋನಿ‌‌ ಬಳಿ ನಡೆದುಕೊಂಡೆ ಹೋದ್ವಿ, ಆಗ ಹರ್ಷ ಏಕೋ ಒಂದು ಥರ ಅನ್ನಿಸ್ತಿದೆ ಗಾಡಿ ತೆಗೆದ್ಕೊಂಡು ಬನ್ನಿ ಎಂದನಂತೆ.‌ ಆಗ ಮೂವರು ಸ್ನೇಹಿತರು ಗಾಡಿ ತರಲು ಹೋಗಿದ್ದಾರೆ.

ಗಾಡಿ ತರಲು ಹೋದವರಿಗೆ ಹರ್ಷನನ್ನು ಬ್ಯಾಟ್ ಹಿಡಿದ್ಕೊಂಡು ಓಡಿಸ್ಕೊಂಡು ಹೋಗ್ತಿದ್ದಾರೆಂದು ಕರೆ ಬಂದಿದೆ. ಆಗ ನಾನು ಅಲ್ಲಿಗೆ ಹೋದೆ. ಖಾಸಿಫ್ ಬ್ಯಾಟ್ ಹಿಡಿದ್ಕೊಂಡು ಹೋಗೊದನ್ನು ನೋಡಿದೆ ಎಂದು ಹರ್ಷನ ಸ್ನೇಹಿತ ಹೇಳಿಕೆ ನೀಡಿದ್ದಾರೆ.

ಹರ್ಷ ಎಲ್ಲಿದ್ದಾನೆ ಎಂದು ಪತ್ತೆ ಹಚ್ಚಲು ವಿಡಿಯೋ ಕರೆಗಳನ್ನ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಜೊತೆಗೆ ಕೊಲೆಯಾದ ಹರ್ಷನ ಫೋನ್ ಕೂಡ ಕಾಣೆಯಾಗಿರುವುದು ಸಾಕಷ್ಟು ಅನುಮಾನಗಳನ್ನ ಹುಟ್ಟು ಹಾಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти Найдите 3 различия на картинках с зайцами для людей Как пройти по крыше: