alex Certify ಪ್ರತಿ ನಿತ್ಯ ಸ್ನಾನ ದ ನಂತ್ರ ಅವಶ್ಯವಾಗಿ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ನಿತ್ಯ ಸ್ನಾನ ದ ನಂತ್ರ ಅವಶ್ಯವಾಗಿ ಮಾಡಿ ಈ ಕೆಲಸ

ದಿನದ ಆರಂಭ ಶುಭವಾಗಿದ್ದರೆ ಇಡೀ ದಿನ ಶುಭವಾಗಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಕೈ ರೇಖೆಯನ್ನು ನೋಡಿ ವಿಷ್ಣು ಹಾಗೂ ತಾಯಿ ಮಹಾಲಕ್ಷ್ಮಿಯನ್ನು ಜಪಿಸಬೇಕು. ಇದಾದ ನಂತ್ರ ಸ್ನಾನ ಮಾಡಬೇಕು. ಸ್ನಾನ ಮಾಡಿದ ತಕ್ಷಣ ಈ ಮಂತ್ರವನ್ನು 108 ಬಾರಿ ಜಪಿಸಬೇಕು. ಈ ಮಂತ್ರವನ್ನು ಜಪಿಸುವುದ್ರಿಂದ ಶ್ರೀ ಕೃಷ್ಣ ಹಾಗೂ ಶ್ರೀ ರಾಮನ ಕೃಪೆ ಸಿಗುತ್ತದೆ. ಭಗವಂತನ ನಾಮ ಜಪಿಸುವುದ್ರಿಂದ ಕೆಟ್ಟ ಸಮಯ ದೂರವಾಗುತ್ತದೆ.

ಸ್ನಾನ ಮಾಡಿದ ನಂತ್ರ

ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ .. ಮಂತ್ರವನ್ನು ಜಪಿಸಬೇಕು. ಇದನ್ನು ಪುರುಷನಿರಲಿ ಇಲ್ಲ ಸ್ತ್ರೀ ಇರಲಿ ಎಲ್ಲರೂ ಜಪಿಸಬಹುದು. ದೇವರ ಮನೆಯಲ್ಲಿ ಕುಳಿತು 108 ಬಾರಿ ಈ ಮಂತ್ರವನ್ನು ಪಠಿಸಬೇಕು.

ಅತ್ಯಂತ ಪ್ರಭಾವಶಾಲಿ ಮಂತ್ರ ಗಾಯತ್ರಿ ಮಂತ್ರ. ಸ್ನಾನ ಮಾಡಿದ ನಂತ್ರ ಮಾತ್ರ ಗಾಯತ್ರಿ ಮಂತ್ರವನ್ನು ಪಠಿಸಬೇಕು. ನಿಧಾನವಾಗಿ ಮಂತ್ರವನ್ನು ಹೇಳಬೇಕು. 108 ಬಾರಿ ಈ ಮಂತ್ರ ಜಪಿಸಿದ್ರೆ ಸಾಕಷ್ಟು ಲಾಭವಿದೆ.

ದೇವರ ಮನೆಯಲ್ಲಿಯೇ ಕುಳಿತು ಜಪ ಮಾಡಬೇಕಾಗುತ್ತದೆ. ಎಲ್ಲ ದೇವರ ಮಂತ್ರವನ್ನೂ ದೇವರ ಮನೆಯಲ್ಲಿ ಕುಳಿತು ಪಠಿಸುವುದ್ರಿಂದ ಹಾಗೂ ಪ್ರತಿದಿನ ದೇವರ ಪೂಜೆ ಮಾಡುವುದ್ರಿಂದ ಕೆಟ್ಟ ಸಮಯ ದೂರವಾಗಿ ಅದೃಷ್ಟ ಕೈ ಹಿಡಿಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...