alex Certify ನಾಪತ್ತೆಯಾಗಿದ್ದ ಗಿಣಿ ಕೊನೆಗೂ ಪತ್ತೆ…! ಹುಡುಕಿಕೊಟ್ಟವರಿಗೆ ಸಿಕ್ತು 85 ಸಾವಿರ ರೂಪಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಪತ್ತೆಯಾಗಿದ್ದ ಗಿಣಿ ಕೊನೆಗೂ ಪತ್ತೆ…! ಹುಡುಕಿಕೊಟ್ಟವರಿಗೆ ಸಿಕ್ತು 85 ಸಾವಿರ ರೂಪಾಯಿ

ತುಮಕೂರಿನ ಕುಟುಂಬವೊಂದು ಕೆಲ ದಿನಗಳ ಹಿಂದೆ ತಮ್ಮ ಮುದ್ದಿನ ಗಿಣಿಯನ್ನು ಕಳೆದುಕೊಂಡಿದ್ದು, ಇದನ್ನು ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಕರಪತ್ರದ ಮೂಲಕ ಮನವಿ ಮಾಡಿದ್ದರು. ಅಲ್ಲದೆ ಇದರ ಹುಡುಕಾಟಕ್ಕೆ ತಾವು ಸಹ ಪ್ರಯತ್ನ ನಡೆಸಿದ್ದರು.

ಆರು ದಿನಗಳ ಹಿಂದೆ ರುಸ್ತುಮ್ ಎಂಬ ಹೆಸರಿನ ಈ ಗಿಣಿ ಮನೆಯಿಂದ ಹಾರಿ ಹೋಗಿದ್ದು, ಇದು ಹೆಚ್ಚು ದೂರ ಹೋಗಿರಲಿಕ್ಕಿಲ್ಲ ಎಂದು ಭಾವಿಸಲಾಗಿತ್ತು. ಅದರಂತೆ ಈ ಗಿಣಿ ಈಗ ತುಮಕೂರಿನ ಬಡ್ಡಿಹಳ್ಳಿಯ ತೋಟವೊಂದರ ಮರದ ಮೇಲೆ ಪತ್ತೆಯಾಗಿದೆ.

ಬಡ್ಡಿಹಳ್ಳಿಯ ಕೃಷ್ಣಮೂರ್ತಿ ಮತ್ತು ಶ್ರೀನಿವಾಸ್ ಎಂಬವರು ಈ ಗಿಣಿಯನ್ನು ಪತ್ತೆ ಮಾಡಿದ್ದು, ಕೂಡಲೇ ಗಿಣಿ ಮಾಲೀಕ ಅರ್ಜುನ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಧಾವಿಸಿ ಬಂದ ಅವರು ಈ ಗಿಣಿ ತಮ್ಮದೆಂದು ಖಾತ್ರಿಪಡಿಸಿಕೊಂಡಿದ್ದಾರೆ.

ಇದೀಗ ಗಿಣಿ ಹುಡುಕಿಕೊಟ್ಟ ಇಬ್ಬರಿಗೆ 85,000 ರೂಪಾಯಿ ಬಹುಮಾನ ನೀಡಲಾಗಿದೆ. ಮೊದಲು 50 ಸಾವಿರ ರೂಪಾಯಿ ನೀಡಲಾಗುವುದು ಎಂದು ತಿಳಿಸಲಾಗಿದ್ದರೂ ಜ್ಯೋತಿಷಿಯೊಬ್ಬರ ಸಲಹೆಯಂತೆ ಈ ಮೊತ್ತವನ್ನು ಹೆಚ್ಚಿಸಲಾಯಿತು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jak se Jak teplota vody Proč semena papriky neklíčí a jak Vědci objevili nejzdravější sacharidy Vepřový jazyk: Tajemství přípravy lahodné lahůdky Odborník na výživu přináší