alex Certify ದಲಿತ ಸಿಎಂ ಎಂಬುದು ವೋಟ್ ಬ್ಯಾಂಕ್ ಅಷ್ಟೇ; ಕಾಂಗ್ರೆಸ್ ಸಿಎಂ ರೇಸ್ ಗೆ ಸಚಿವ ಸುಧಾಕರ್ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಲಿತ ಸಿಎಂ ಎಂಬುದು ವೋಟ್ ಬ್ಯಾಂಕ್ ಅಷ್ಟೇ; ಕಾಂಗ್ರೆಸ್ ಸಿಎಂ ರೇಸ್ ಗೆ ಸಚಿವ ಸುಧಾಕರ್ ಟಾಂಗ್

ಬೆಂಗಳೂರು: ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ರೇಸ್ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಕಾಂಗ್ರೆಸ್ ಹುಟ್ಟಿದಾಗಿನಿಂದಲೂ ಸಿಎಂ ಹುದ್ದೆಗಾಗಿ ರೇಸ್ ನಡೆಯುತ್ತಿದೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಕಾಂಗ್ರೆಸ್ ದಲಿತರ ಪರ, ಅಲ್ಪಸಂಖ್ಯಾತರ ಪರ ಅಂತಾರೆ. ಆದರೆ ಅದೆಲ್ಲ ಬರಿ ವೋಟ್ ಬ್ಯಾಂಕ್ ಅಷ್ಟೇ. ಕಾಂಗ್ರೆಸ್ ನವರು ಯಾವ ದಲಿತರನ್ನು ಸಿಎಂ ಮಾಡಿದ್ದಾರೆ ? ಅವರು ಇಲ್ಲಿಯವರೆಗೆ ಯಾರನ್ನು ಉದ್ದಾರ ಮಾಡಿದ್ದಾರೆ ? ದಲಿತರನ್ನು ಪ್ರಧಾನಿ, ಸಿಎಂ ಮಾಡಿದ್ದಾರಾ ? ಅವರ ಹೆಸರು ಹೇಳಿ ಮತ ಪಡೆಯುತ್ತಾರೆ ಅಷ್ಟೇ ಎಂದರು.

ಬಿಜೆಪಿಯಲ್ಲಿ ಪ್ರಧಾನಿ ಮೋದಿ ಹಾಗೇ ಮಾಡಲ್ಲ. ಎಲ್ಲಾ ವರ್ಗದವರನ್ನೂ ಜೊತೆಯಲ್ಲಿ ಕರೆದೊಯ್ಯುತ್ತಾರೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...