alex Certify ತ್ಯಾವರೆಕೊಪ್ಪ ಲಯನ್ ಸಫಾರಿಯ ಹುಲಿ ‘ರಾಮ’ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ಯಾವರೆಕೊಪ್ಪ ಲಯನ್ ಸಫಾರಿಯ ಹುಲಿ ‘ರಾಮ’ ಇನ್ನಿಲ್ಲ

ಶಿವಮೊಗ್ಗ ಸಮೀಪದಲ್ಲಿರುವ ತ್ಯಾವರೆಕೊಪ್ಪ ‘ಲಯನ್ ಸಫಾರಿ’ ಪ್ರಮುಖ ಪ್ರವಾಸಿ ಕೇಂದ್ರಗಳ ಪೈಕಿ ಪ್ರಮುಖವಾಗಿದೆ. ಶಿವಮೊಗ್ಗ ಕೇಂದ್ರ ಸ್ಥಾನದಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿ ಲಯನ್ ಸಫಾರಿ ಇದ್ದು, ವಾರಾಂತ್ಯದ ದಿನಗಳಲ್ಲಿ ಜನ ಕಿಕ್ಕಿರಿದು ನೆರೆಯುತ್ತಾರೆ.

ಇಲ್ಲಿ ಹುಲಿ, ಸಿಂಹಗಳು ಪ್ರಮುಖ ಆಕರ್ಷಣೆಯಾಗಿದ್ದು, ಅರಣ್ಯ ಇಲಾಖೆ ವಾಹನಗಳಲ್ಲಿ ಪ್ರವಾಸಿಗರನ್ನು ಕರೆದೊಯ್ದು ಇವುಗಳನ್ನು ತೋರಿಸಲಾಗುತ್ತದೆ. ಈ ಪೈಕಿ ಹಿರಿಯ ಹುಲಿ ‘ರಾಮ’ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ಆದರೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 17 ವರ್ಷದ ‘ರಾಮ’ ಈಗ ಸಾವನ್ನಪ್ಪಿದೆ. ಇದರಿಂದಾಗಿ ಈಗ ಸಫಾರಿಯಲ್ಲಿ ಕೇವಲ ಐದು ಹುಲಿಗಳು ಉಳಿದುಕೊಂಡಂತಾಗಿದೆ. ಈ ಹಿಂದೆ ಮತ್ತೊಂದು ಹಿರಿಯ ಹುಲಿ ‘ವಾಲಿ’ ಅನಾರೋಗ್ಯದಿಂದಾಗಿ ಸಾವನ್ನಪ್ಪಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...