![](https://kannadadunia.com/wp-content/uploads/2022/01/rahul-modi-15443701181554838305.jpg)
ಗಣರಾಜ್ಯೋತ್ಸವ ದಿನಾಚರಣೆಗೂ ಕೆಲವೇ ದಿನಗಳ ಮುಂಚೆ ಭಾರತದ ಭವಿಷ್ಯವಾದ ಯುವಕನನ್ನು ಚೀನಾ ಅಪಹರಿಸಿದೆ. ನಾವು ಎಂದಿಗೂ ಮಿರಾಂ ತರೋನ್ ಕುಟುಂಬದ ಜೊತೆಗೆ ಇದ್ದೇವೆ ಹಾಗೂ ನಾವು ಯಾವುದೇ ಕಾರಣಕ್ಕೂ ಭರವಸೆ ಕಳೆದುಕೊಳ್ಳುವುದಿಲ್ಲ. ನಾವು ಸೋಲನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮೌನವನ್ನು ನೋಡಿದರೆ ಅವರಿಗೆ ಈ ಪ್ರಕರಣದ ಬಗ್ಗೆ ಯಾವುದೇ ಕಾಳಜಿಯೇ ಇಲ್ಲವೆಂದೆನಿಸುತ್ತೆ ಎಂದು ರಾಹುಲ್ ಗಾಂಧಿ ಟ್ವೀಟಾಯಿಸಿದ್ದಾರೆ .
ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿಯು ಈಶಾನ್ಯ ರಾಜ್ಯದ ಲುಂಗ್ಟಾ ಜೋರ್ ಪ್ರದೇಶದಿಂದ ಬಾಲಕನನ್ನು ಅಪಹರಿಸಿದೆ ಎಂದು ಸಂಸದ ತಪಿರ್ ಗಾವೊ ಆರೋಪಿಸಿದ ಒಂದು ದಿನದ ನಂತರ ರಾಹುಲ್ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದಾರೆ.