alex Certify ಚಂದ್ರಗ್ರಹಣದ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿದ್ರೆ ದೂರವಾಗುತ್ತೆ ಸುತ್ತ ಇರುವ ನೆಗೆಟಿವಿಟಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಂದ್ರಗ್ರಹಣದ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿದ್ರೆ ದೂರವಾಗುತ್ತೆ ಸುತ್ತ ಇರುವ ನೆಗೆಟಿವಿಟಿ…..!

ಇಂದು ಕಾರ್ತಿಕ ಮಾಸದ ಹುಣ್ಣಿಮೆಯ ತಿಥಿ. ವರ್ಷದ ಕೊನೆಯ ಚಂದ್ರಗ್ರಹಣ. ಚಂದ್ರಗ್ರಹಣದ ಸೂತಕ ಕಾಲ ಆರಂಭವಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಂದ್ರಗ್ರಹಣದ ಸೂತಕ ಕಾಲದಲ್ಲಿ  ಧಾರ್ಮಿಕ ಕೆಲಸ, ಪೂಜೆ ಮತ್ತು ಆಚರಣೆಗಳನ್ನು ಮಾಡುವುದಿಲ್ಲ. ಗ್ರಹಣ ಮುಗಿಯುವವರೆಗೂ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ.

ಈ ಸಮಯದಲ್ಲಿ ದೇವರ ವಿಗ್ರಹವನ್ನು ಮುಟ್ಟುವುದು ಮತ್ತು ಪೂಜೆ ಮಾಡುವುದನ್ನು ನಿಷೇಧಿಸಲಾಗಿದೆ. ಗ್ರಹಣವನ್ನು ಅಶುಭ ಘಟನೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಆಹಾರ ಸೇವನೆ ನಿಷಿದ್ಧ. ಅಡುಗೆಯನ್ನೂ ಮಾಡುವಂತಿಲ್ಲ. ಗ್ರಹಣದ ಸಮಯದಲ್ಲಿ ಒಂದೇ ಸ್ಥಳದಲ್ಲಿ ಕುಳಿತು ದೇವರನ್ನು ಸ್ಮರಿಸಬೇಕು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಗ್ರಹಣ ಪ್ರಾರಂಭವಾಗುವ ಮೊದಲು ತುಳಸಿ ಎಲೆಗಳನ್ನು ನೀರಿನ ಪಾತ್ರೆಗಳಲ್ಲಿ ಮತ್ತು ಆಹಾರ ಪದಾರ್ಥಗಳಲ್ಲಿ ಹಾಕಬೇಕು ಎಂಬುದು ನಂಬಿಕೆ. ಇದರಿಂದಾಗಿ ಗ್ರಹಣದ ಪ್ರಭಾವವು ಆಹಾರ ಪದಾರ್ಥಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಗ್ರಹಣದ ಅವಧಿಯಲ್ಲಿ ಕೆಲವು ಮಂತ್ರಗಳನ್ನು ಪಠಿಸಿದರೆ ವಿಶೇಷ ಪ್ರಯೋಜನಗಳಿವೆ. ಚಂದ್ರಗ್ರಹಣದ ಸಮಯದಲ್ಲಿ ಚಂದ್ರದೇವನ ಮಂತ್ರಗಳನ್ನು ಪಠಿಸಲಾಗುತ್ತದೆ. ಈ ಮಂತ್ರ ಪಠಣದಿಂದ ನಮ್ಮ ಸುತ್ತ ಯಾವುದೇ ನಕಾರಾತ್ಮಕತೆ ಇರುವುದಿಲ್ಲ. ಈ ಸಮಯದಲ್ಲಿ ವಿಶ್ವದೇವನನ್ನು ಸಹ ಧ್ಯಾನಿಸಲಾಗುತ್ತದೆ.ಇವುಗಳಲ್ಲಿ ಇಂದ್ರ, ಅಗ್ನಿ, ಸೋಮ, ತ್ವಸ್ತ್ರ, ರುದ್ರ, ಪುಖಾನ್, ವಿಷ್ಣು, ಅಶ್ವಿನಿ, ಮಿತ್ರವರುಣ್ ಮತ್ತು ಅಂಗಿರಸ ಸೇರಿದ್ದಾರೆ. ಚಂದ್ರಗ್ರಹಣದ ಸಮಯದಲ್ಲಿ ಈ ಎಲ್ಲಾ ಮಂತ್ರಗಳನ್ನು ಧ್ಯಾನಿಸಿದರೆ ಶುಭ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.

ಗ್ರಹಣದ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿ

1. ಓಂ ಇಂದ್ರಾಯ ನಮಃ

2. ಓಂ ಆಗ್ನೇಯೇ ನಮಃ

3. ಓಂ ಸೋಮಾಯ ನಮಃ

4. ಓಂ ತಾಷ್ಟರಾಯ ನಮಃ

5. ಓಂ ರುದ್ರಾಯ ನಮಃ

6. ಓಹ್ ಪೂರ್ಣಾಯ ನಮಃ

7. ಓಂ ವಿಷ್ಣುವೇ ನಮಃ

8. ಓಂ ಅಶ್ವಿನಿಯೇ ನಮಃ

9. ಓಂ ಮಿತ್ರವರುಣಾಯ ನಮಃ

10. ಓಂ ಅಂಗಿರಸಾಯ ನಮಃ

ಚಂದ್ರದೇವ ಮಂತ್ರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರಗ್ರಹಣದ ಸಮಯದಲ್ಲಿ ಚಂದ್ರ ದೇವರ ಮಂತ್ರಗಳನ್ನು ಪಠಿಸುವುದರಿಂದ ವ್ಯಕ್ತಿಯು ಬಲಶಾಲಿಯಾಗುತ್ತಾನೆ. ಗ್ರಹಣದ ಸೂತಕದ ಸಮಯದಲ್ಲಿ ಮಂತ್ರವನ್ನು ಪಠಿಸುವಾಗ, ಬಿಳಿ ಬಣ್ಣದ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಪಕ್ಕಕ್ಕೆ ಇರಿಸಿಕೊಳ್ಳಬೇಕು. ಗ್ರಹಣದ ಕೊನೆಯಲ್ಲಿ, ಈ ವಸ್ತುಗಳನ್ನು ನಿರ್ಗತಿಕರಿಗೆ ದಾನ ಮಾಡಿ. ಇದರೊಂದಿಗೆ ಚಂದ್ರದೇವನ ಶುಭ ಫಲಗಳು ದೊರೆಯುತ್ತವೆ.

– ಓ  ಶ್ರೀ ಶಾಂ ಸ ಚಂದ್ರಮಸೇ ನಮಃ .

– ಓಂ ಐಂ ಹ್ರೀಂ ಸೋಮೇ ನಮಃ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...