alex Certify ಗಂಡ ಹೆಂಡತಿ ನಡುವೆ ಮತ್ತೊಬ್ಬಳ ಎಂಟ್ರಿ; ನೇಣಿಗೆ ಕೊರೊಳೊಡ್ಡಿದ ಪತ್ನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡ ಹೆಂಡತಿ ನಡುವೆ ಮತ್ತೊಬ್ಬಳ ಎಂಟ್ರಿ; ನೇಣಿಗೆ ಕೊರೊಳೊಡ್ಡಿದ ಪತ್ನಿ..!

ಬೆಂಗಳೂರು- ಅವರಿಬ್ಬರು ಮದುವೆಯಾಗಿ ಕೇವಲ ಒಂದು ವರ್ಷ ಮಾತ್ರ. ಸುಖ ಸಂಸಾರ ಬಿಟ್ಟು, ಮತ್ತೊಬ್ಬಳ ಸಹವಾಸ ಮಾಡಿದ್ದ ಪತಿರಾಯ ಪತ್ನಿಯ ಆತ್ಮಹತ್ಯೆಗೆ ಕಾರಣವಾಗಿದ್ದಾನೆ. ಸುಖಸಂಸಾರದಲ್ಲಿ ಬಿರುಗಾಳಿ ಎಂಬಂತೆ ಆಕೆಯ ಎಂಟ್ರಿ ಬಾಳಿ ಬದುಕಬೇಕಾದವಳ ಜೀವವನ್ನೇ ಬಲಿ ತೆಗೆದುಕೊಂಡಿದೆ.

ಈ ಘಟನೆ ನಡೆದಿರೋದು ಬೆಂಗಳೂರಿನ ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್‍ನಲ್ಲಿ. ಐಟಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ 27 ವರ್ಷದ ಶ್ವೇತಾ ಸಾವನ್ನಪ್ಪಿದ ದುರ್ದೈವಿ. ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬಾತನೊಂದಿಗೆ ಕಳೆದ ವರ್ಷ ಮದುವೆಯಾಗಿದ್ದಳು. ತನ್ನ ಗಂಡನಿಗೆ ಬೇರೊಂದು ಯುವತಿಯ ಸಂಗ ಇದೆ ಅಂತ ಗೊತ್ತೇ ಇರಲಿಲ್ಲ. ಇತ್ತೀಚೆಗೆ ಈ ವಿಷಯ ಶ್ವೇತಾಳಿಗೆ ತಿಳಿದಿದೆ. ಈ ವಿಚಾರ ಗೊತ್ತಾದ ಬಳಿಕ ಶ್ವೇತಾ ಹಾಗೂ ಅಭಿಷೇಕ್ ಮಧ್ಯೆ ಪ್ರತಿನಿತ್ಯ ಜಗಳವಾಗುತ್ತಿತ್ತಂತೆ.

ಇತ್ತೀಚೆಗೆ ರಾಜಿ ಪಂಚಾಯ್ತಿ ಕೂಡ ಕುಟುಂಬಸ್ಥರು ಮಾಡಿದ್ದಾರೆ. ನಂತರ ಜೊತೆಗೂಡಿ ಸಂಸಾರ ಮಾಡಿದ್ದಾರೆ. ಆದರೆ ನಂತರವೂ ಅಭಿಷೇಕ್ ಅದೇ ಚಾಳಿ ಮುಂದುವರೆಸಿದ್ದಾನೆ. ಇದರಿಂದ ಬೇಸತ್ತ ಶ್ವೇತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ಶ್ವೇತಾ ಕುಟುಂಬಸ್ಥರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಅಭಿಷೇಕ್ ವಿಚಾರಣೆ ಮಾಡಿದಾಗ ಸತ್ಯ ಒಪ್ಪಿಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...