alex Certify BIG NEWS: ಕೂಡಲೇ ಕೋವಿಡ್ ಪರಿಹಾರ ನೀಡಲು ‘ಸುಪ್ರೀಂ’ ಸೂಚನೆ: ವಿಳಂಬ ಮಾಡಿದ ರಾಜ್ಯ ಸರ್ಕಾರಗಳಿಗೆ ತರಾಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೂಡಲೇ ಕೋವಿಡ್ ಪರಿಹಾರ ನೀಡಲು ‘ಸುಪ್ರೀಂ’ ಸೂಚನೆ: ವಿಳಂಬ ಮಾಡಿದ ರಾಜ್ಯ ಸರ್ಕಾರಗಳಿಗೆ ತರಾಟೆ

ಕೋವಿಡ್ 19 ಸಂತ್ರಸ್ತರ ಕುಟುಂಬಗಳಿಗೆ ಸರಿಯಾದ ಸಮಯಕ್ಕೆ ಪರಿಹಾರಗಳನ್ನು ವಿತರಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಕೋವಿಡ್​ ಪರಿಹಾರವು ಸಂಬಂಧಪಟ್ಟ ಕುಟುಂಬಗಳಿಗೆ ತಲುಪುವಲ್ಲಿ ನಿಮ್ಮ ಪ್ರಯತ್ನಗಳನ್ನು ಇನ್ನಷ್ಟು ತೀವ್ರಗೊಳಿಸಿ ಎಂದು ರಾಜ್ಯಗಳಿಗೆ ಸರ್ವೋಚ್ಛ ನ್ಯಾಯಾಲಯ ಖಡಕ್​ ಸೂಚನೆ ನೀಡಿದೆ.
ಕೋವಿಡ್​ 19ನಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ಪರಿಹಾರವನ್ನು ನೀಡುವಂತೆ ಕೋರಿ ವಕೀಲ್ ಗೌರವ್​ ಕುಮಾರ್ ಬನ್ಸಾಲ್​ ಹಾಗೂ ವಕೀಲ ಸಮೀರ್​ ಸೋಧಿ ಪ್ರತಿನಿಧಿಸಿದ ಮಧ್ಯಸ್ಥಿಕೆದಾರರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.

ಕಳೆದ ವರ್ಷ ಕೂಡ ಇದೇ ವಿಚಾರವಾಗಿ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್​ ಕೊರೊನಾ ಸಾಂಕ್ರಾಮಿಕದಿಂದಾಗಿ ಕುಟುಂಬಸ್ಥರನ್ನು ಕಳೆದುಕೊಂಡ ಕುಟುಂಬಗಳಿಗೆ 30 ದಿನಗಳ ಅವಧಿಯಲ್ಲಿ ಜಿಲ್ಲಾಡಳಿತವು ಅರ್ಜಿಗಳನ್ನು ಸ್ವೀಕರಿಸಿದ ಮೂವತ್ತು ದಿನಗಳಲ್ಲಿ 50 ಸಾವಿರ ರೂಪಾಯಿ ವಿತರಿಸಬೇಕು ಎಂದು ಹೇಳಿತ್ತು .
ಈ ವಿಚಾರಣೆಯನ್ನು ಸದ್ಯ ಫೆಬ್ರವರಿ 4ಕ್ಕೆ ಮುಂದೂಡಲಾಗಿದೆ. ಇದಕ್ಕೂ ಮುನ್ನ ರಾಜ್ಯಗಳು ಕೊರೊನಾ ಪರಿಹಾರದ ಕುರಿತಂತೆ ಕೋರ್ಟ್​ಗೆ ಹೊಸ ಅಫಿಡವಿಟ್​ ಸಲ್ಲಿಸಬಹುದು ಎಂದು ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...