alex Certify ಕೊಟ್ಟ ಹಣ ಹಿಂದಿರುಗಿಸಿಲ್ಲವೆಂದು ಮಾಜಿ ಸಿಎಂ ಬಂಗಾರಪ್ಪ ಪುತ್ರಿ ಮನೆ ಮುಂದೆ ದಂಪತಿ ಪ್ರತಿಭಟನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಟ್ಟ ಹಣ ಹಿಂದಿರುಗಿಸಿಲ್ಲವೆಂದು ಮಾಜಿ ಸಿಎಂ ಬಂಗಾರಪ್ಪ ಪುತ್ರಿ ಮನೆ ಮುಂದೆ ದಂಪತಿ ಪ್ರತಿಭಟನೆ…!

ತಮ್ಮಿಂದ ಸಾಲವಾಗಿ ಪಡೆದ 3.20 ಕೋಟಿ ರೂಪಾಯಿಗಳನ್ನು ಈವರೆಗೂ ಹಿಂದಿರುಗಿಸಿಲ್ಲವೆಂದು ಆರೋಪಿಸಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಹಿರಿಸಾವೆಯ ದಂಪತಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರಿಯ ಮನೆ ಮುಂದೆ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ಓಂ ಪ್ರಕಾಶ್ ಮತ್ತು ಅವರ ಪತ್ನಿ ತಮ್ಮ ಮಗುವಿನ ಜೊತೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಇರುವ ಅನಿತಾ ಪವನ್ ಅವರ ನಿವಾಸದ ಮುಂದೆ ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದು, ಬಳಿಕ ಪ್ರಕರಣ ಸಂಪಿಗೆಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಅನಿತಾ ಪವನ್ ಅವರು 2019ರಲ್ಲಿ ಅಡವಿಟ್ಟಿರುವ ಚಿನ್ನಾಭರಣ ಹರಾಜಿಗೆ ಬಂದಿದೆ ಎಂದು ಹೇಳಿ ಓಂ ಪ್ರಕಾಶ್ ಅವರಿಂದ 1.60 ಕೋಟಿ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಬಳಿಕ ಫ್ಲಾಟ್ ರಿಜಿಸ್ಟ್ರೇಷನ್ ಗೆ ಮತ್ತೆ 1.60 ಕೋಟಿ ರೂಪಾಯಿ ಪಡೆದಿದ್ದು, ಒಟ್ಟು 3.20 ಕೋಟಿ ರೂಪಾಯಿಗಳನ್ನು ಈವರೆಗೂ ಹಿಂದಿರುಗಿಸಿರಲಿಲ್ಲ ಎಂದು ಹೇಳಲಾಗಿದೆ.

ಇದೀಗ ಪೊಲೀಸರ ಸಮ್ಮುಖದಲ್ಲಿ ನಡೆದ ಮಾತುಕತೆ ವೇಳೆ ಏಪ್ರಿಲ್ 10ರ ಒಳಗಾಗಿ ಹಣ ಮರಳಿಸಲು ಅನಿತಾ ಪವನ್ ಅವರ ಕುಟುಂಬ ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...