alex Certify ಕಾರ್ಕಳದಲ್ಲಿ ನೆಲೆ ನಿಂತ ಏಕ ಶಿಲಾ ಮೂರ್ತಿ ವಿರಕ್ತ ಗೊಮ್ಮಟೇಶ್ವರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಕಳದಲ್ಲಿ ನೆಲೆ ನಿಂತ ಏಕ ಶಿಲಾ ಮೂರ್ತಿ ವಿರಕ್ತ ಗೊಮ್ಮಟೇಶ್ವರ…!

ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿರುವ ಗೊಮ್ಮಟನನ್ನು ವೀಕ್ಷಿಸಲು ನೀವು ಮಂಗಳೂರಿನಿಂದ 32 ಮೈಲು, ಮೂಡುಬಿದ್ರೆಯಿಂದ 10 ಮೈಲು, ವೇಣೂರಿನಿಂದ 22 ಮೈಲು ದೂರ ಕ್ರಮಿಸಬೇಕು. ಇದು ಕರಿಕಲ್ಲಿನ ನೆಲವಾದ್ದರಿಂದ ಕಾರ್ಕಳ ಎಂಬ ಹೆಸರು ಬಂದಿದೆ.

ಜಗತ್ತಿನಲ್ಲೇ ಎರಡನೇ ಅತೀ ಎತ್ತರದ ಬಾಹುಬಲಿಯ ಏಕ ಶಿಲಾ ಮೂರ್ತಿಯ ವಿಗ್ರಹ ಇದಾಗಿದೆ. ಈ ವಿಗ್ರಹದ ಎತ್ತರ 42 ಅಡಿ. ಕಾರ್ಕಳವನ್ನಾಳುತ್ತಿದ್ದ ವೀರಪಾಂಡ್ಯ ಭೈರರಸನು 1432 ರಲ್ಲಿ ಗೊಮ್ಮಟೇಶ್ವರ ಮೂರ್ತಿಯನ್ನು ಸ್ಥಾಪಿಸಿದ ಎಂಬ ಐತಿಹಾಸಿಕ ಉಲ್ಲೇಖವಿದೆ. ಈ ಮೂರ್ತಿ ನಿರ್ಮಾಣಗೊಂಡು ಇಂದಿಗೆ 590 ವರ್ಷಗಳಾಗಿವೆ.

ಇಲ್ಲಿನ ಗೊಮ್ಮಟ ತಪಸ್ಸಿಗೆ ನಿಂತಂತೆ ಭಾವಪೂರ್ಣವಾಗಿದೆ. ಸತ್ಯ, ಸಂಯಮ, ಅಹಿಂಸೆ, ವೈರಾಗ್ಯ, ತ್ಯಾಗದ ಆದರ್ಶವಾಗಿ ಗೋಮಟೇಶ್ವರ ಮೂರ್ತಿ ಸರ್ವಕಾಲಿಕ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ. ಜೈನ ಸಂಪ್ರದಾಯದಂತೆ ಪ್ರತೀ 12 ವರ್ಷಕ್ಕೊಮ್ಮೆ ವಿಗ್ರಹಕ್ಕೆ ಮಹಾಮಸ್ತಕಾಭಿಷೇಕ ನೆರವೇರಿಸುವ ಸಂಪ್ರದಾಯವೂ ನಡೆದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se