
ಕರ್ನಾಟಕದ ಪಠ್ಯಪುಸ್ತಕ ಒಂದರಲ್ಲಿ ಸಾವರ್ಕರ್ ಜೈಲಿನಲ್ಲಿದ್ದಾಗ ಬುಲ್ ಬುಲ್ ಪಕ್ಷಿ ಮೇಲೆ ಕುಳಿತು ತಾಯ್ನಾಡಿಗೆ ಭೇಟಿ ನೀಡುತ್ತಿದ್ದರು ಎಂಬ ವರ್ಣನೆ ಇದ್ದು, ಇದನ್ನು ವ್ಯಂಗ್ಯ ಮಾಡುವ ಕಾರಣಕ್ಕಾಗಿ ಈ ರೀತಿ ಫೋಟೋ ಶೇರ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಡಿಎಂಕೆ ಪಕ್ಷದ ಐಟಿ ವಿಭಾಗದ ಮುಖ್ಯಸ್ಥ ಟಿಆರ್ಬಿ ರಾಜಾ ಇಂತದೊಂದು ಚಿತ್ರವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.