alex Certify ಎಸಿ ಸ್ಫೋಟದಿಂದ ಮನೆಗೆ ಬೆಂಕಿ; ತಾಯಿ – ಮಕ್ಕಳಿಬ್ಬರು ಸಜೀವ ದಹನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಸಿ ಸ್ಫೋಟದಿಂದ ಮನೆಗೆ ಬೆಂಕಿ; ತಾಯಿ – ಮಕ್ಕಳಿಬ್ಬರು ಸಜೀವ ದಹನ

ರಾಜ್ಯದಲ್ಲಿ ಬಿರು ಬೇಸಿಗೆ ಆರಂಭವಾಗಿರುವ ಕಾರಣ ಇದರಿಂದ ಹೊರಬರಲು ಫ್ಯಾನ್, ಎಸಿ ಗೆ ಜನ ಮೊರೆ ಹೋಗುತ್ತಿದ್ದಾರೆ. ಹೀಗೆ ಆನ್ ಮಾಡಿದ್ದ ಎಸಿ ಸ್ಪೋಟಗೊಂಡ ಪರಿಣಾಮ ತಾಯಿ ಹಾಗೂ ಇಬ್ಬರು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಆರ್ ಟಿ ಪಿ ಎಸ್ ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಸಿದ್ದಲಿಂಗಯ್ಯ ಸ್ವಾಮಿ ಅವರ ಶಕ್ತಿನಗರದ ಮನೆಯಲ್ಲಿ ಸೋಮವಾರದಂದು ಈ ಘಟನೆ ನಡೆದಿದ್ದು, 33 ವರ್ಷದ ರಂಜಿತಾ,13 ವರ್ಷದ ಮೃದುಲಾ ಹಾಗೂ 5 ವರ್ಷದ ತಾರುಣ್ಯ ಮೃತಪಟ್ಟಿದ್ದಾರೆ.

ಎಸಿ ಸ್ಪೋಟಗೊಂಡ ಪರಿಣಾಮ ಮನೆಗೆ ಬೆಂಕಿ ತಗುಲಿದ್ದು, ಸಕಾಲಕ್ಕೆ ಹೊರಬರಲಾಗದೆ ಮೂವರು ಸಹ ಸಾವಿಗೀಡಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...