alex Certify ಉಮಾಪತಿ ಇಂದು ನನ್ನನ್ನ ರೋಡಿಗೆ ತಂದು ನಿಲ್ಲಿಸಿದ್ದಾನೆ: ಅರುಣಾ ಕುಮಾರಿ ಅಳಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಮಾಪತಿ ಇಂದು ನನ್ನನ್ನ ರೋಡಿಗೆ ತಂದು ನಿಲ್ಲಿಸಿದ್ದಾನೆ: ಅರುಣಾ ಕುಮಾರಿ ಅಳಲು

ನಟ ದರ್ಶನ್​​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣ ಸಿನಿಮೀಯ ರೀತಿಯಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆಯುತ್ತಲೇ ಇದೆ. ಅರುಣಾ ಕುಮಾರಿ ವಂಚಕಿ ಎಂದು ಉದ್ಯಮಿ ನಾಗವರ್ಧನ್​ ಹೇಳಿಕೆ ನೀಡಿರುವ ಬೆನ್ನಲ್ಲೇ ಅರುಣಾ ಕುಮಾರಿ ಸ್ಫೋಟಕ ಹೇಳಿಕೆಯನ್ನ ನೀಡಿದ್ದಾರೆ.

ಇಷ್ಟೆಲ್ಲಾ ಘಟನೆ ನಡೆಯೋದಕ್ಕೆ ಮುಖ್ಯ ಕಾರಣವೇ ಉಮಾಪತಿ. ಆತನಿಗೆ ಹರ್ಷ ಹಾಗೂ ದರ್ಶನ್​ ಒಟ್ಟಿಗೆ ಇರೋದು ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಆತ ನನ್ನನ್ನ ಬಳಕೆ ಮಾಡಿಕೊಂಡ. ನನ್ನನ್ನ ದರ್ಶನ್​ಗೆ ಭೇಟಿ ಮಾಡಿಸಿದ್ದೇ ಈ ಉಮಾಪತಿ. ನಾನು ಹೇಳಿದಂತೆ ನಾಟಕ ಮಾಡು ಎಂತಲೂ ಇದೇ ಉಮಾಪತಿ ಹೇಳಿಕೊಟ್ಟಿದ್ದ. ಮಾತ್ರವಲ್ಲದೇ ನನಗೆ ಸ್ವಂತ ಮನೆ ನೀಡೋದಾಗಿಯೂ ಆತ ಆಮಿಷ ನೀಡಿದ್ದ ಎಂದು ಅರುಣಾ ಕುಮಾರಿ ಆರೋಪಿಸಿದ್ದಾರೆ.

ನನ್ನ ಜೀವನದಲ್ಲಿ ನನಗೆ ಮೊದಲು ಮೋಸ ಆಗಿದ್ದೇ ಕುಮಾರ್ ಎಂಬವರಿಂದ. ಆತ ನನ್ನನ್ನ ಮದುವೆಯಾಗಿ ನನ್ನ ಜೀವನ ಹಾಳು ಮಾಡಿದ. ನಾನು ಮೈ ಮಾರಿ ಜೀವನ ಮಾಡುವ ಹಂತಕ್ಕೂ ತಂದು ನಿಲ್ಲಿಸಿದ್ದ. ಹೇಗೋ ಆತನಿಂದ ತಪ್ಪಿಸಿಕೊಂಡು ತಂದೆಯ ಮನೆಯಲ್ಲಿ ಮರ್ಯಾದೆಯಿಂದ ಬದುಕುತ್ತಿದ್ದೆ. ಆದರೆ ಈಗ ಉಮಾಪತಿ ನನ್ನ ಜೀವನವನ್ನೇ ಹಾಳು ಮಾಡಿದ್ದಾನೆ ಎಂದು ಕಣ್ಣೀರು ಹಾಕಿದ್ರು.

ಎಲ್ಲರೂ ರೋಡಿಗೆ ಬರಬೇಕು, ಅನೇಕ ರಹಸ್ಯ ಬಿಚ್ಚಿಟ್ಟ ಅರುಣಾಕುಮಾರಿ ಆಕ್ರೋಶ

ಉಮಾಪತಿಗೆ ಈ ಪ್ರಕರಣ ಇಷ್ಟು ದೊಡ್ಡ ಆಗುತ್ತೆ ಎಂಬ ಐಡಿಯಾ ಇರಲಿಲ್ಲ. ಆತನಿಗೆ ದರ್ಶನ್​ ಹಾಗೂ ಹರ್ಷ ಸ್ನೇಹದಲ್ಲಿ ಬಿರುಕು ಮೂಡಿಸೋದಷ್ಟೇ ಬೇಕಿತ್ತು. ಆದರೆ ಈ ಪ್ರಕರಣ ದೊಡ್ಡದಾಗುತ್ತಿದ್ದಂತೆಯೇ ಅವರೆಲ್ಲ ಒಂದಾದ್ರು. ನನ್ನನ್ನ ಟಿಶ್ಯೂ ಪೇಪರ್​ನಂತೆ ಬಳಕೆ ಮಾಡಿ ಬಿಸಾಡಿಬಿಟ್ರು. ಇದೆಲ್ಲದರಿಂದ ನಾನು ರೋಸಿ ಹೋಗಿದ್ದೇನೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧಳಾಗಿದ್ದೇನೆ ಎಂದು ಅಳಲು ತೋಡಿಕೊಂಡ್ರು.

ನನಗೂ 12 ವರ್ಷದ ಮಗನಿದ್ದಾನೆ. ಹೆಣ್ಣು ಮಗಳು ಅನ್ನೋದನ್ನ ನೋಡದೇ ಈ ರೀತಿ ದುರುಪಯೋಗಪಡಿಸಿಕೊಳ್ಳೋದು ಸರೀನಾ..? ನಾಳೆ ಇವರ ಮನೆ ಹೆಣ್ಣು ಮಕ್ಕಳಿಗೂ ಇದೇ ಗತಿ ಬರೋದಿಲ್ಲವಾ..? ನನಗೂ ಉಮಾಪತಿಗೂ 6 ತಿಂಗಳ ಹಿಂದಿನ ಪರಿಚಯವಿದೆ. ಈ ಎಲ್ಲಾ ಹಗರಣಕ್ಕೆ ಕಾರಣವೇ ಉಮಾಪತಿ. ನನಗೆ ಈ ಪ್ರಕರಣದಿಂದ ನಯಾಪೈಸೆ ಸಿಕ್ಕಿಲ್ಲ . ಉಮಾಪತಿಗೆ ತಲೆ ಕೆಟ್ಟಿದೆ. ಆತ ನನ್ನನ್ನ ರೋಡಿಗೆ ತಂದು ನಿಲ್ಲಿಸಿದ್ದಾನೆ ಎಂದು ಹೇಳಿದ್ರು.

ಇನ್ನು ಉದ್ಯಮಿ ನಾಗವರ್ಧನ್​ ಆರೋಪಗಳ ವಿಚಾರವಾಗಿಯೂ ಮಾತನಾಡಿದ ಅರುಣಾ ಕುಮಾರಿ, ಆತ ಯಾರೆಂದೂ ನನಗೂ ಗೊತ್ತಿರಲಿಲ್ಲ. ಆತ ಏನು ಕತೆ ಹೇಳ್ತಿದ್ದಾನೆ. ಅದು ನಂಬೋಕೆ ಸಾಧ್ಯವೇ..? ಫೇಸ್​ಬುಕ್​ನಲ್ಲಿ ಪರಿಚಯವಾದಕೂಡಲೇ ಅವನು ಚಿನ್ನಾಭರಣ ಕೊಡುತ್ತಾನಾ..? ನನ್ನನ್ನ ರಕ್ಷಣೆ ಮಾಡೋಕೆ ಅವನ್ಯಾರು..? ಅಲ್ಲದೇ ಅಷ್ಟೆಲ್ಲ ಮೋಸ ಆಗಿದೆ ಎಂಬ ವ್ಯಕ್ತಿ ಇಷ್ಟು ವರ್ಷ ಏನು ಮಾಡುತ್ತಿದ್ದನಂತೆ..? ಎಂದು ಪ್ರಶ್ನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...