alex Certify ಉಕ್ರೇನ್​​ನಿಂದ ಹೊರಟ ಭಾರತೀಯರ ಕೊನೆಯ ಬ್ಯಾಚ್​​: ಮೊಳಗಿನ ʼಭಾರತ್​ ಮಾತಾ ಕಿ ಜೈʼ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್​​ನಿಂದ ಹೊರಟ ಭಾರತೀಯರ ಕೊನೆಯ ಬ್ಯಾಚ್​​: ಮೊಳಗಿನ ʼಭಾರತ್​ ಮಾತಾ ಕಿ ಜೈʼ ಘೋಷಣೆ

ಯುದ್ಧ ಪೀಡಿತ ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದ ಭಾರತೀಯ ವಿದ್ಯಾರ್ಥಿಗಳ ಕೊನೆಯ ಬ್ಯಾಚ್​ ಭಾನುವಾರ ಬುಡಾಪೆಸ್ಟ್​ ಮೂಲಕ ಸ್ಥಳಾಂತರಿಸಲಾಗಿದ್ದು ಈ ವೇಳೆಯಲ್ಲಿ ʼಹೌ ಈಸ್​ ದಿ ಜೋಶ್ʼ​ ಹಾಗೂ ʼಭಾರತ್​ ಮಾತಾ ಕಿ ಜೈʼ ಎಂಬ ಘೋಷಣೆಗಳು ಮೊಳಗಿದವು.

ಉಕ್ರೇನ್​ನ ಈಶಾನ್ಯ ಭಾಗದಲ್ಲಿರುವ ಸುಮಿಯಲ್ಲಿ ಇನ್ನೂ ಭಾರತೀಯರು ಸಿಲುಕಿಕೊಂಡಿದ್ದಾರೆ. ಇವರನ್ನು ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವ ಹರ್ದೀಪ್​ ಪುರಿ ಹೇಳಿದರು.

ವಿದ್ಯಾರ್ಥಿಗಳು ಹೋಟೆಲ್​ನಿಂದ ಬುಡಾಪೆಸ್ಟ್​ ವಿಮಾನ ನಿಲ್ದಾಣಕ್ಕೆ ಬಸ್​ನ ಮೂಲಕ ಬಂದಿಳಿದರು. ಪ್ರತಿಯೊಬ್ಬರ ಕೈಯಲ್ಲೂ ತ್ರಿವರ್ಣ ಧ್ಚಜವು ಕಾಣುತ್ತಿತ್ತು. ಪ್ರತಿಯೊಬ್ಬರು ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಈ ಸ್ನೇಹ ಮುಂದುವರಿಸೋಣ ಎಂದು ಪ್ರತಿಜ್ಞೆ ಮಾಡಿದರು.

ಇಲ್ಲಿಯವರೆಗೆ ರೋಮಾನಿಯಾ ಗಡಿಯಿಂದ 6680 ಭಾರತೀಯರನ್ನು ರಕ್ಷಿಸಲಾಗಿದೆ. ಪೋಲೆಂಡ್​ನಿಂದ 2822, ಹಂಗೇರಿಯಿಂದ 5300 ಹಾಗೂ ಸ್ಲೋವಾಕಿಯಾದಿಂದ 1118 ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.

— India in Hungary (@IndiaInHungary) March 6, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...