alex Certify ಈ ರಾಶಿಯ ಉದ್ಯೋಗಾಕಾಂಕ್ಷಿಗಳಿಗೆ ಇದೆ ಇಂದು ಶುಭ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ಉದ್ಯೋಗಾಕಾಂಕ್ಷಿಗಳಿಗೆ ಇದೆ ಇಂದು ಶುಭ ಸುದ್ದಿ

ಮೇಷ : ಮನಸ್ಸನ್ನ ಎಂದಿಗೂ ಗೊಂದಲದ ಗೂಡಾಗಿಸಿಕೊಳ್ಳಬೇಡಿ. ಇದರಿಂದ ನಿಮಗೆ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಗಮನ ನೀಡಲು ಸಾಧ್ಯವಾಗೋದಿಲ್ಲ. ಸಂಗಾತಿಯಿಂದ ಶುಭ ಸುದ್ದಿಯನ್ನ ಕೇಳಲಿದ್ದೀರಿ. ವ್ಯಾಪಾರಿಗಳಿಗೆ ಇಂದು ಸಾಮಾನ್ಯ ದಿನವಾಗಿದೆ.

ವೃಷಭ : ನೀವು ಬಹಳ ದಿನಗಳಿಂದ ಕೊಂಡುಕೊಳ್ಳಬೇಕು ಎಂದು ಕನಸು ಕಂಡಿದ್ದ ದುಬಾರಿ ವಸ್ತುವನ್ನ ಇಂದು ಖರೀದಿ ಮಾಡುತ್ತೀರಾ. ಅನೇಕ ಪ್ರಮುಖ ಕೆಲಸಗಳಿಗೆ ಹಿರಿಯರಿಂದ ಉತ್ತಮ ಸಲಹೆ ಸ್ವೀಕರಿಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಲಾಭ ನಿಮ್ಮದಾಗಲಿದೆ.

ಮಿಥುನ : ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಸಮಯ ಸನ್ನಿಹಿತವಾಗಲಿದೆ. ಸಿಕ್ಕ ಅವಕಾಶಗಳನ್ನ ಒದ್ದು ಬಳಿಕ ಪಶ್ಚಾತಾಪ ಪಡಬೇಡಿ. ಸ್ನೇಹಿತರ ಹೊಸ ಪ್ರಯತ್ನಕ್ಕೆ ನಿಮ್ಮಿಂದ ಬೆಂಬಲ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಹಿಡಿತ ಸಾಧಿಸಿ.

ಕಟಕ : ನಿಮ್ಮ ಪಾಲಿಗೆ ಇದು ಅದೃಷ್ಟದ ದಿನವಾಗಿದೆ. ನೀವು ಅಂದುಕೊಂಡಿದ್ದು ನೆರವೇರಲಿದೆ. ಮಾತುಗಳ ಮೇಲೆ ನಿಯಂತ್ರಣ ಸಾಧಿಸಿದಷ್ಟೂ ನಿಮಗೆ ಒಳ್ಳೆಯದಾಗಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ನಿಮ್ಮ ದೀರ್ಘಕಾಲದ ಹೋರಾಟಕ್ಕೆ ಜಯ ಸಿಗಲಿದೆ.

ಸಿಂಹ : ಸುಮ್ಮನೆ ಮಾತನಾಡುತ್ತಾ ಕಾಲಹರಣ ಮಾಡೋದನ್ನ ಬಿಟ್ಟು ಕೆಲಸದ ಕಡೆಗೆ ಗಮನ ನೀಡಿದಲ್ಲಿ ನಿಮಗೆ ಲಾಭ ಕಾದಿದೆ. ಉದ್ಯಮಿಗಳಿಗೆ ಇಂದು ಧನಾಗಮನದ ಸಾಧ್ಯತೆ ಇದೆ. ಕುಟುಂಬದ ಜಗಳ ವಿಚಾರದಲ್ಲಿ ಮೂಗು ತೂರಿಸಲು ಹೋಗಬೇಡಿ.

ಕನ್ಯಾ : ಹೊಸ ಮಾರ್ಗಗಳು ನಿಮ್ಮ ಮುಂದೆ ತೆರೆದುಕೊಳ್ಳಲಿದೆ. ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಳ್ಳಿ. ಉದ್ಯೋಗಾಕಾಂಕ್ಷಿಗಳಿಗೆ ಇಂದು ಶುಭ ಸುದ್ದಿ ಕೇಳಿಬರಲಿದೆ. ದಾಂಪತ್ಯದಲ್ಲಿ ಬಹುಕಾಲದಿಂದ ಇದ್ದ ಮನಸ್ತಾಪವು ದೂರಾಗಲಿದೆ. ಕಾಲಹರಣ ಮಾಡಬೇಡಿ. ಶ್ರೀಲಕ್ಷ್ಮೀನರಸಿಂಹನನ್ನು ಧ್ಯಾನಿಸಿ.

ತುಲಾ : ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ರಸ್ತೆ ಬದಿಯ ಆಹಾರ ಸೇವನೆ ಮಾಡಬೇಡಿ. ಯಾವುದೇ ಕಠಿಣ ಕೆಲಸವಾದರೂ ಸರಿ ನಿಮ್ಮ ಪ್ರಯತ್ನವನ್ನ ಕೈಬಿಡಬೇಡಿ. ಕಚೇರಿ ಕೆಲಸಗಳು ಸರಾಗವಾಗಿ ನಡೆಯಲಿವೆ. ಸಂಗಾತಿಯಿಂದ ಶುಭ ಸುದ್ದಿಯನ್ನ ಕೇಳಲಿದ್ದೀರಿ.

ವೃಶ್ಚಿಕ : ಕುಟುಂಬದಲ್ಲಿ ಅತಿಯಾದ ಜವಾಬ್ದಾರಿ ಹೊತ್ತಿರುವ ನಿಮಗೆ ಕ್ರಮೇಣವಾಗಿ ವಿಶ್ರಾಂತಿ ಸಿಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ಲಾಭ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅಡ್ಡದಾರಿ ಹಿಡಿಯುವ ಪ್ರಯತ್ನ ಬೇಡಬೇ ಬೇಡ. ದಾರಿ ತಪ್ಪಿಸುವವರ ವಿರುದ್ಧ ಜಾಗ್ರತೆಯಿಂದಿರಿ.

ಧನು : ಮಕ್ಕಳ ಬಗ್ಗೆ ಅತಿಯಾಗಿ ಚಿಂತಿಸೋದನ್ನ ಬಿಟ್ಟುಬಿಡಿ. ಕಚೇರಿ ಕೆಲಸದಲ್ಲಿ ನಡೆಯುತ್ತಿರುವ ಕಿರಿಕಿರಿಯಿಂದ ಪಾರಾಗಲು ಹನುಮಂತನನ್ನ ಆರಾಧಿಸಿ. ಜವಳಿ ಉದ್ಯಮಿಗಳಿಗೆ ಇಂದು ಒಳ್ಳೆಯ ದಿನ. ಮಾದಕ ವ್ಯಸನ ಮಾಡೋದನ್ನ ತ್ಯಜಿಸದೇ ಹೋದಲ್ಲಿ ಗಂಭೀರ ಅನಾರೋಗ್ಯ ಸಮಸ್ಯೆಗೆ ತುತ್ತಾಗಲಿದ್ದೀರಿ.

ಮಕರ : ವಿದ್ಯಾರ್ಥಿಗಳು ಓದಿನತ್ತ ಹೆಚ್ಚು ಗಮನ ಹರಿಸಲಿದ್ದಾರೆ. ವೃತ್ತಿರಂಗದಲ್ಲಿ ಕಿರಿಕಿರಿ ಅನುಭವಿಸುತ್ತೀರಾ. ಕುಟುಂಬಸ್ಥರ ಹಿತಾಸಕ್ತಿ ಕಾಪಾಡಲು ಹೋಗಿ ನಿಮ್ಮತನವನ್ನ ಕಳೆದುಕೊಳ್ಳಬೇಡಿ. ಹಣ ಸಂಪಾದಿಸುವಲ್ಲಿ ಅಡ್ಡ ದಾರಿ ಬೇಡ.

ಕುಂಭ : ಹಣಕಾಸಿನ ಸಮಸ್ಯೆಯನ್ನು ಎದುರಿಸಲಿದ್ದೀರಿ. ಆಸ್ತಿ ವಿಚಾರದಲ್ಲಿ ಬಿಕ್ಕಟ್ಟನ್ನ ಎದುರಿಸುತ್ತೀರಾ. ದಾಂಪತ್ಯ ಜೀವನದಲ್ಲಿ ಸುಖವಿದೆ. ನೂತನ ದಂಪತಿಗೆ ಸಂತಾನ ಭಾಗ್ಯವಿದೆ. ವಿದ್ಯಾರ್ಥಿಗಳು ಇನ್ನಷ್ಟು ಕಠಿಣ ಪರಿಶ್ರಮ ಪಡಬೇಕಿದೆ. ಸಾರ್ವಜನಿಕ ಜೀವನದಲ್ಲಿ ಮನ್ನಣೆ ಸಿಗಲಿದೆ.

ಮೀನ : ಆರ್ಥಿಕ ದೃಷ್ಟಿಕೋನದಿಂದ ನಿಮಗಿದು ಶುಭ ದಿನವಾಗಿದೆ. ರಾಜಕೀಯ ಜೀವನದಲ್ಲಿ ಉತ್ತಮ ಅವಕಾಶ ಕೂಡಿ ಬರಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸುತ್ತೀರಾ. ಧಾರ್ಮಿಕ ಕ್ಷೇತ್ರಕ್ಕೆ ಪ್ರಯಾಣ ಬೆಳೆಸುತ್ತೀರಾ. ದೂರ ಪ್ರಯಾಣದ ಅವಕಾಶ ಕೂಡಿ ಬಂದರೂ ಸಹ ಹಣಕಾಸಿನ ಸಮಸ್ಯೆ ಎದುರಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...