alex Certify ಈ ರಾಶಿಯವರು ಇಂದು ಕೈಗೊಳ್ಳಲಿದ್ದೀರಿ ಮಹತ್ವಪೂರ್ಣ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರು ಇಂದು ಕೈಗೊಳ್ಳಲಿದ್ದೀರಿ ಮಹತ್ವಪೂರ್ಣ ಕಾರ್ಯ

ಮೇಷ

ಉದ್ಯಮದಲ್ಲಿ ಮಾಡಿಕೊಂಡ ಒಪ್ಪಂದಗಳಿಂದ ಲಾಭವಾಗಲಿದೆ. ಇತರರು ನಿಮ್ಮ ಕೆಲಸ ಮಾಡುತ್ತಾರೆಂದು ನಿರೀಕ್ಷಿಸಬೇಡಿ. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ.

ವೃಷಭ ರಾಶಿ

ನೀವು ಯಾವಾಗಲೂ ಮಾಡಬಯಸಿದ ರೀತಿಯ ಕೆಲಸವನ್ನು ಕಚೇರಿಯಲ್ಲಿ ಇಂದು ನೀವು ಮಾಡಬಹುದು. ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ.

ಮಿಥುನ ರಾಶಿ

ಕೆಲವು ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತದೆ ಹಾಗೂ ಅವು ನಿಮಗೆ ಹೊಸ ಆರ್ಥಿಕ ಲಾಭ ತರುತ್ತವೆ. ನಿಮ್ಮನ್ನು ಈ ಮೊದಲು ಆಮಂತ್ರಿಸಿರದಿದ್ದಲ್ಲಿ ಈಗ ಆಮಂತ್ರಿಸಿದಲ್ಲಿ, ಆಹ್ವಾನವನ್ನು ಸಭ್ಯತೆಯಿಂದ ಸ್ವೀಕರಿಸಿ.

ಕರ್ಕ ರಾಶಿ

ಇಂದು ನಿಮಗೆ ಅನೇಕ ಹೊಸ ಆರ್ಥಿಕ ಯೋಜನೆಗಳು ದೊರಕುತ್ತವೆ. ಯಾವುದೇ ಬದ್ಧತೆಗೊಳಗಾಗುವ ಮುನ್ನ ಸಾಧಕ- ಬಾಧಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣವಿರಲಿದೆ. ಪದೋನ್ನತಿಯ ಸಾಧ್ಯತೆಗಳಿವೆ.

ಸಿಂಹ ರಾಶಿ

ನಿಮ್ಮ ಸಂಗಾತಿ ನಿಮ್ಮ ಜೊತೆಗಿರುವ ಬಗ್ಗೆ ನಿಮಗೆ ಕೆಲವು ಅಷ್ಟೇನೂ ಒಳ್ಳೆಯದಲ್ಲದ ವಿಷಯಗಳನ್ನು ಹೇಳಬಹುದು. ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ಭಾರೀ ಆತ್ಮವಿಶ್ವಾಸದ ಲಾಭ ತೆಗೆದುಕೊಳ್ಳಿ ಮತ್ತು ಕೆಲವು ಹೊಸ ಗೆಳೆಯರು ಮತ್ತು ಸ್ನೇಹಿತರನ್ನು ಸಂಪಾದಿಸಿ.

ಕನ್ಯಾ ರಾಶಿ

ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆಯ ಅನುಭವವಾಗಲಿದೆ. ಅಧಿಕ ಪರಿಶ್ರಮ ಪಟ್ಟರೂ ತಕ್ಕ ಪ್ರತಿಫಲ ದೊರೆಯದೇ ಇರುವುದರಿಂದ ನಿರಾಸೆ ಆವರಿಸಬಹುದು.

ತುಲಾ ರಾಶಿ

ಕುಟುಂಬದವರು ಮತ್ತು ಸ್ನೇಹಿತರ ಜೊತೆಗೆ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದೀರಿ. ವಸ್ತ್ರ ಮತ್ತು ವಾಹನ ಪ್ರಾಪ್ತಿಯಾಗಲಿದೆ. ಮನೆಯಲ್ಲಿನ ವಾದಗಳು ಕುಟುಂಬದ ಸದಸ್ಯರೊಂದಿಗೆ ಅಸಮಾಧಾನಕ್ಕೆ ಕಾರಣವಾಗುತ್ತದೆ.

ವೃಶ್ಚಿಕ ರಾಶಿ

ನೌಕರಿ ಮತ್ತು ವ್ಯಾಪಾರದಲ್ಲಿ ಅನುಕೂಲಕರ ವಾತಾವರಣವಿದೆ.ಆರ್ಥಿಕ ಯೋಜನೆಗಳಲ್ಲಿ ಆರಂಭಿಕ ವಿಘ್ನ ಎದುರಾಗಲಿದೆ. ಆದ್ರೆ ನಂತರ ನಿಮ್ಮ ಕಾರ್ಯ ಸುಲಭವಾಗಿ ನೆರವೇರಲಿದೆ.

ಧನು ರಾಶಿ

ನಿಮ್ಮ ಭಾವನೆಗಳಿಗೆ ಕೆಲವರು ನೋವುಂಟು ಮಾಡುವ ಪ್ರಸಂಗ ಎದುರಾಗಬಹುದು.  ಕುಟುಂಬಸ್ಥರು ಅಥವಾ ಸ್ನೇಹಿತರೊಂದಿಗೆ ಒಳ್ಳೆ ಭೋಜನ ಸವಿಯಲಿದ್ದೀರಿ. ಅಚಾನಕ್ಕಾಗಿ ಪ್ರವಾಸ ಮಾಡಬೇಕಾಗಿ ಬರಬಹುದು.

ಮಕರ ರಾಶಿ

ಮಹತ್ವಪೂರ್ಣ ಕಾರ್ಯವನ್ನು ಇವತ್ತು ಪೂರ್ಣಗೊಳಿಸಿ. ಧನಲಾಭದ ಸಂಭವ ಇದೆ. ಮನೆಯ ಸದಸ್ಯರೇ ನಿಮ್ಮನ್ನು ವಿರೋಧಿಸುತ್ತಾರೆ. ಕಾರ್ಯ ಪ್ರಾರಂಭವಾದ್ರೂ ಅಪೂರ್ಣವಾಗಿ ಉಳಿಯಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ.

ಕುಂಭ ರಾಶಿ

ಇಂದು ಆನಂದವಾಗಿ ಸಮಯ ಕಳೆಯುತ್ತೀರಿ. ಎಲ್ಲಾ ಕಾರ್ಯಗಳನ್ನೂ ವ್ಯವಸ್ಥಿತವಾಗಿ ಮಾಡಿ ಮುಗಿಸಲಿದ್ದೀರಿ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ರಮಣೀಯ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇವತ್ತು ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ಮೀನ ರಾಶಿ

ಇವತ್ತು ಕೈಗೊಂಡ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಸಿಗಲಿದೆ. ಪ್ರತಿಸ್ಪರ್ಧಿಗಳೆದುರು ನಿಮಗೆ ಜಯ ಸಿಗಲಿದೆ. ಸ್ನೇಹಿತರಿಂದ ಮನಸ್ಸಿಗೆ ನೋವುಂಟಾಗುವಂತಹ ಪ್ರಸಂಗ ಎದುರಾಗಬಹುದು. ಖರ್ಚು ಹೆಚ್ಚಾಗಲಿದೆ. ಮನಸ್ಸಿನಲ್ಲಿರುವ ಭ್ರಾಂತಿಯನ್ನು ಹೊಡೆದೋಡಿಸಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...