alex Certify ಈ ರಾಶಿಯವರಿಗೆ ಇಂದು ಶುಭದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಶುಭದಿನ

ಮೇಷ ರಾಶಿ 

ಮಧ್ಯಾಹ್ನದ ನಂತರ ಕುಟುಂಬ ಸದಸ್ಯರು ಮತ್ತು ಒಡಹುಟ್ಟಿದವರೊಂದಿಗೆ ಆನಂದದಾಯಕವಾಗಿ ಸಮಯ ಕಳೆಯುತ್ತೀರಿ. ಪ್ರತಿಸ್ಪರ್ಧಿಯನ್ನು ಸೋಲಿಸುತ್ತೀರಿ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಪ್ರವಾಸ ಯೋಗವಿದೆ.

ವೃಷಭ ರಾಶಿ

ಇವತ್ತು ನಿಮಗೆ ಶುಭದಿನ. ಕಾರ್ಯಸಿದ್ಧಿಯಾಗಲಿದೆ, ಲಕ್ಷ್ಮಿ ಕಟಾಕ್ಷ ನಿಮ್ಮ ಮೇಲಿದೆ. ಶಾರೀರಿಕ ಮತ್ತು ಮಾನಸಿಕ ಸ್ಥಿತಿ ಉತ್ಸಾಹಮಯ ಮತ್ತು ಪ್ರಫುಲ್ಲತೆಯಿಂದ ಕೂಡಿರಲಿದೆ. ಹಾಗಾಗಿ ಪ್ರತಿ ಕಾರ್ಯವನ್ನೂ ಉತ್ಸಾಹದಿಂದ್ಲೇ ಮಾಡುತ್ತೀರಾ.

ಮಿಥುನ ರಾಶಿ

ಮನಸ್ಸು ವ್ಯಗ್ರವಾಗಿರಲಿದೆ. ಹಾಗಾಗಿ ಆಧ್ಯಾತ್ಮದ ಕಡೆಗೆ ಮನಸ್ಸು ಹರಿಸಿ, ಶಾಂತವಾಗಿರಿ. ಮಧ್ಯಾಹ್ನದ ನಂತರ ಸ್ಪೂರ್ತಿ ಹಾಗೂ ಉಲ್ಲಾಸದ ಅನುಭವವಾಗುತ್ತದೆ. ಕುಟುಂಬದಲ್ಲೂ ಆನಂದದ ವಾತಾವರಣವಿರಲಿದೆ. ಶುಭ ಸಂದರ್ಭಗಳಿಗೆ ಭೇಟಿ ಮಾಡುವ ಅವಕಾಶವಿದೆ.

ಕರ್ಕ ರಾಶಿ

ಇವತ್ತಿನ ದಿನ ಎಲ್ಲಾ ವಿಧದಿಂದ್ಲೂ ಲಾಭ ತರಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿರುತ್ತೀರಿ. ಅದರ ಪ್ರತಿಫಲವಾಗಿ ನಿಮ್ಮ ಪ್ರತಿಷ್ಠೆ ಹೆಚ್ಚಲಿದೆ. ಅವಿವಾಹಿತರಿಗೆ ಸೂಕ್ತ ಜೀವನ ಸಂಗಾತಿ ದೊರೆಯುವ ಸಾಧ್ಯತೆ ಇದೆ.

ಸಿಂಹ ರಾಶಿ

ಇವತ್ತು ನಿಮಗೆ ಶುಭದಿನ. ಪರೋಪಕಾರಿ ಕಾರ್ಯವನ್ನು ಮಾಡಲಿದ್ದೀರಿ. ವ್ಯಾಪಾರದಲ್ಲೂ ವೃದ್ಧಿಯಾಗುವ ಸಂಭವ ಇದೆ. ನಿಮ್ಮ ಕಾರ್ಯದ ಮೂಲಕ ಉನ್ನತ ಅಧಿಕಾರಿಗಳನ್ನು ಸಂತುಷ್ಟಪಡಿಸಲಿದ್ದೀರಿ, ಕಚೇರಿಯಲ್ಲೂ ಗೌರವ ಹೆಚ್ಚಲಿದೆ.

ಕನ್ಯಾ ರಾಶಿ

ಪ್ರವಾಸಕ್ಕೆ ಇಂದು ಅನುಕೂಲಕರ ದಿನ. ವ್ಯಾಪಾರ ಸಂಬಂಧಿ ಕೆಲಸಗಳಿಂದ್ಲೂ ಲಾಭವಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳ ಆಯೋಜನೆಯಾಗಲಿದೆ. ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ.

ತುಲಾ ರಾಶಿ

ಇಂದು ನಿಮಗೆ ಮಿಶ್ರಫಲವಿದೆ, ಅನುಕೂಲತೆ ಪ್ರತಿಕೂಲತೆ ಎರಡೂ ಸಂದರ್ಭಗಳು ಎದುರಾಗುತ್ತವೆ. ಹೊಸ ಯೋಜನೆಗಳ ಬಗ್ಗೆ ಚಿಂತನೆ ನಡೆಸುತ್ತೀರಿ. ಆಲಸ್ಯ ಮತ್ತು ವ್ಯಗ್ರತೆ ಮನಸ್ಸಿನಲ್ಲಿ ತುಂಬಿರುತ್ತದೆ.

ವೃಶ್ಚಿಕ ರಾಶಿ

ವಾಹನ ಚಾಲನೆ ಸಂದರ್ಭದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ, ಜಾಗರೂಕರಾಗಿರಿ. ಆಕಸ್ಮಿಕವಾಗಿ ಹಣ ಖರ್ಚಾಗಲಿದೆ. ಮಧ್ಯಾಹ್ನದ ನಂತರ ಬೌದ್ಧಿಕ ಮತ್ತು ಸಾಹಿತ್ಯ ಪ್ರವೃತ್ತಿಗಳ ಬಗ್ಗೆ ಆಸಕ್ತಿ ಮೂಡಲಿದೆ.

ಧನು ರಾಶಿ

ಆಕಸ್ಮಿಕವಾಗಿ ಹಣ ಖರ್ಚಾಗಲಿದೆ. ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಮೂಡಲಿದೆ. ಉದ್ಯೋಗ ಮತ್ತು ಉದ್ಯಮದಲ್ಲಿ ಅನುಕೂಲಕರ ಪರಿಸ್ಥಿತಿ ಇದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ.

ಮಕರ ರಾಶಿ

ಪ್ರಬಲ ಲಾಭದ ಯೋಗವಿದೆ. ಆಕಸ್ಮಿಕವಾಗಿ ಹಣವೂ ಖರ್ಚಾಗಲಿದೆ. ಪಾಲುದಾರರೊಂದಿಗೆ ಜಗಳವಾಗಬಹುದು. ಕೋಪದ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಇಂದು ಹೊಸ ಕಾರ್ಯ ಆರಂಭಿಸಬೇಡಿ.

ಕುಂಭ ರಾಶಿ

ಮನಸ್ಸು ವಿಚಲಿತವಾಗಿರುತ್ತದೆ. ಹೊಟ್ಟೆಗೆ ಸಂಬಂಧಿಸಿದ ವ್ಯಾಧಿಯಿಂದ ನೋವು ಅನುಭವಿಸುತ್ತೀರಿ. ವಿದ್ಯಾಭ್ಯಾಸ ಮಾಡುವವರಿಗೆ ವಿಘ್ನಗಳು ಎದುರಾಗಬಹುದು. ಆಕಸ್ಮಿಕವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ.

ಮೀನ ರಾಶಿ

ಇವತ್ತು ನಿಮಗೆ ಮಧ್ಯಮ ಫಲದಾಯಕ ದಿನ. ಶಾರೀರಿಕ ಸ್ಪೂರ್ತಿ ಮತ್ತು ಮಾನಸಿಕ ಪ್ರಸನ್ನತೆಯ ಅಭಾವವಾಗಲಿದೆ. ಮನೆಯಲ್ಲಿ ಉಗ್ರ ವಾತಾವರಣವಿರುತ್ತದೆ. ವ್ಯಾವಹಾರಿಕ ಬದುಕಿನಲ್ಲಿ ಮಾನಹಾನಿಯಾಗದಂತೆ ಎಚ್ಚರ ವಹಿಸಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...