alex Certify ಈ ರಾಶಿಯವರಿಗಿದೆ ಇಂದು ವ್ಯಾಪಾರದಲ್ಲಿ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ವ್ಯಾಪಾರದಲ್ಲಿ ಲಾಭ

ಮೇಷ ರಾಶಿ

ದೀರ್ಘಾವಧಿ ಆರ್ಥಿಕ ಯೋಜನೆಗೆ ಸಮಯ ಅನುಕೂಲಕರವಾಗಿದೆ. ಇಂದು ಲಾಭದಾಯಕ ದಿನ. ದೇಹ ಮತ್ತು ಮನಸ್ಸು ಉಲ್ಲಾಸದಿಂದಿರುತ್ತದೆ. ಮಿತ್ರರು ಮತ್ತು ಸಂಬಂಧಿಕರಿಂದ ಭೋಜನ ದೊರೆಯಲಿದೆ.

ವೃಷಭ ರಾಶಿ

ನಿಮ್ಮ ಮಾತಿನ ಚಮತ್ಕಾರದಿಂದ ಲಾಭವಾಗಲಿದೆ. ಹೊಸ ಸಂಬಂಧಗಳು ಬೆಸೆಯಲಿವೆ. ಶುಭಕಾರ್ಯಕ್ಕೆ ಪ್ರೇರಣೆ ಸಿಗಲಿದೆ. ಸಾಹಿತ್ಯ ಕ್ಷೇತ್ರದ ಬಗ್ಗೆ ಆಸಕ್ತಿ ಹೆಚ್ಚಲಿದೆ. ಆದ್ರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ.

ಮಿಥುನ ರಾಶಿ

ಮನಸ್ಸು ಗೊಂದಲಮಯವಾಗಿರುತ್ತದೆ, ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಧಿಕ ಭಾವುಕತೆ ನಿಮ್ಮನ್ನು ದುರ್ಬಲರನ್ನಾಗಿಸುತ್ತದೆ. ಪ್ರವಾಸ ಮುಂದೂಡುವುದು ಸೂಕ್ತ.

ಕರ್ಕ ರಾಶಿ

ಮನಸ್ಸು ಮತ್ತು ದೇಹಕ್ಕೆ ಸ್ಪೂರ್ತಿಯ ಕೊರತೆಯಿಲ್ಲ. ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮಿತ್ರರಿಂದ ಲಾಭವಿದೆ. ಶುಭ ಕಾರ್ಯ ಆರಂಭಕ್ಕೆ ಸಮಯ ಅನುಕೂಲಕರವಾಗಿದೆ.

ಸಿಂಹ ರಾಶಿ

ಕುಟುಂಬ ಸದಸ್ಯರೊಂದಿಗೆ ಸುಖ-ಶಾಂತಿಯಿಂದ ಸಮಯ ಕಳೆಯಲಿದ್ದೀರಿ. ಸ್ತ್ರೀ ಮಿತ್ರರಿಂದ ವಿಶೇಷ ಲಾಭವಾಗಲಿದೆ. ನಿಮ್ಮ ಪ್ರಭಾವಿ ಮಾತುಗಳಿಂದ ಇತರರ ಗಮನ ಸೆಳೆಯಲಿದ್ದೀರಿ.

ಕನ್ಯಾ ರಾಶಿ

ಇಂದು ಲಾಭದಾಯಕ ದಿನ. ವೈಚಾರಿಕ ಸಮೃದ್ಧಿ ವೃದ್ಧಿಸಲಿದೆ. ಮೃದು ಮಾತುಗಳಿಂದ ಸೌಹಾರ್ದಯುತ ಸಂಬಂಧ ಸೃಷ್ಟಿಯಾಗಲಿದೆ. ಉತ್ತಮ ಭೋಜನ ಪ್ರಾಪ್ತವಾಗಲಿದೆ.

ತುಲಾ ರಾಶಿ

ಸಂಯಮ ಕಳೆದುಕೊಳ್ಳಬೇಡಿ. ಅನೈತಿಕ ಕಾರ್ಯಗಳಲ್ಲಿ ತೊಡಗಬೇಡಿ. ದುರ್ಘಟನೆಯಿಂದ ಬಚಾವ್ ಆಗಿ. ಮೋಜು ಮಸ್ತಿ, ಸುತ್ತಾಟಕ್ಕಾಗಿ ಹೆಚ್ಚು ಹಣ ಖರ್ಚಾಗಲಿದೆ.

ವೃಶ್ಚಿಕ ರಾಶಿ

ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ. ಸ್ನೇಹಿತರ ಭೇಟಿ, ಪ್ರವಾಸದ ಆಯೋಜನೆ ಮಾಡಲಿದ್ದೀರಿ. ವಿವಾಹ ಉತ್ಸುಕರಿಗೆ ಮದುವೆ ಯೋಗವಿದೆ. ಪುತ್ರ ಮತ್ತು ಪತ್ನಿಯಿಂದ ಲಾಭವಾಗಲಿದೆ.

ಧನು ರಾಶಿ

ಇಂದು ನಿಮಗೆ ಶುಭ ದಿನ. ಗೃಹಸ್ಥ ಜೀವನದಲ್ಲಿ ಸಂತೋಷ ಕಾಣಲಿದ್ದೀರಿ. ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ಹಿರಿಯ ಅಧಿಕಾರಿಗಳು ಪ್ರಸನ್ನರಾಗುತ್ತಾರೆ. ತಂದೆ ಮತ್ತು ಹಿರಿಯರಿಂದ ಲಾಭವಿದೆ.

ಮಕರ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ಬೌದ್ಧಿಕ ಕಾರ್ಯಗಳಲ್ಲಿ ಹೊಸ ವಿಚಾರಗಳಿಂದ ಪ್ರಭಾವಿತರಾಗುತ್ತೀರಿ, ಅದನ್ನು ಅಳವಡಿಸಿಕೊಳ್ತೀರಿ. ಸೃಜನಾತ್ಮಕ ಶಕ್ತಿಯ ಪರಿಚಯವಾಗಲಿದೆ.

ಕುಂಭ ರಾಶಿ

ದೈನಿಕ ಕಾರ್ಯಗಳನ್ನು ಬದಿಗಿಟ್ಟು ಇಂದು ಸುತ್ತಾಡಲಿದ್ದೀರಿ. ಮನರಂಜನೆಗೆ ಸಮಯ ಮೀಸಲಾಗಿಡುತ್ತೀರಿ. ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸಾಥ್ ಕೊಡಲಿದ್ದಾರೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ಮೀನ ರಾಶಿ

ಅನೈತಿಕ ಕೃತ್ಯಗಳಿಂದ ದೂರವಿರಿ. ಮಾತಿನ ಮೇಲೆ ಸಂಯಮವಿರಲಿ. ಮನೆಯಲ್ಲಿ ಘರ್ಷಣೆ ಉಂಟಾಗಬಹುದು. ಖರ್ಚು ಹೆಚ್ಚಾಗಲಿದೆ, ಇದರಿಂದ ಆರ್ಥಿಕ ಮುಗ್ಗಟ್ಟು ಎದುರಾಗಬಹುದು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
99 % hostesek neví: Jak Jak vyprat límce 1. Jak Jak si děláte kysané zelí špatně: časté Jak správně péčovat o froté ručníky: praktické Tajemství úspěšné pekařky: Jak zachránit kynuté těsto, které nekyne? Jíst a pít