alex Certify ಅಸಭ್ಯ ವರ್ತನೆಗೆ ಬಂಧನ; CCBಯನ್ನೇ ಮುಚ್ಚುತ್ತೇನೆ ಎಂದಿದ್ದ ಕೆಜಿಎಫ್ ಬಾಬು; ಚುನಾವಣೆಯಲ್ಲಿ ಗೆದ್ದರೆ ಐಪಿಸಿ ಸೆಕ್ಷನ್ ನ್ನೇ ರದ್ದು ಮಾಡುತ್ತೇನೆನ್ನಬಹುದು; ಕೈ ಅಭ್ಯರ್ಥಿ ಬಗ್ಗೆ ಬಿಜೆಪಿ ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸಭ್ಯ ವರ್ತನೆಗೆ ಬಂಧನ; CCBಯನ್ನೇ ಮುಚ್ಚುತ್ತೇನೆ ಎಂದಿದ್ದ ಕೆಜಿಎಫ್ ಬಾಬು; ಚುನಾವಣೆಯಲ್ಲಿ ಗೆದ್ದರೆ ಐಪಿಸಿ ಸೆಕ್ಷನ್ ನ್ನೇ ರದ್ದು ಮಾಡುತ್ತೇನೆನ್ನಬಹುದು; ಕೈ ಅಭ್ಯರ್ಥಿ ಬಗ್ಗೆ ಬಿಜೆಪಿ ವ್ಯಂಗ್ಯ

ಬೆಂಗಳೂರು: ಅಸಭ್ಯ ವರ್ತನೆ ತೋರಿದ್ದಕ್ಕಾಗಿ ತಮ್ಮನ್ನು ಬಂಧಿಸಿದ ಸಿಸಿಬಿ ಕಚೇರಿಯನ್ನೇ ಮುಚ್ಚಿಸುತ್ತೇನೆ ಎಂದು ಕಾಂಗ್ರೆಸ್ ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಭಾರತೀಯ ದಂಡ ಸಂಹಿತೆಯನ್ನೇ ರದ್ದು ಮಾಡುತ್ತೇನೆಂದು ಹೇಳಬಹುದು ಡಿಕೆಶಿ ಅವರೇ ಎಷ್ಟು ಕೋಟಿಗೆ ಸೀಟ್ ಡೀಲ್ ಮಾಡಿಕೊಂಡಿದ್ದೀರಿ? ಎಂದು ಬಿಜೆಪಿ ಪ್ರಶ್ನಿಸಿದೆ.

ಡಿಕೆಶಿಯವರೇ ನಿಮ್ಮ ನೆಚ್ಚಿನ ಅಭ್ಯರ್ಥಿಯ ಅರ್ಹತೆ ನೋಡಿ. ಒಂದೊಮ್ಮೆ ಚುನಾವಣೆಯಲ್ಲಿ ಗೆದ್ದರೆ ವಿಧಾನ ಪರಿಷತ್ತಿನಲ್ಲಿ ಅಕ್ಷರಭ್ಯಾಸ ಮಾಡಿಸುತ್ತೀರಾ? ಖರ್ಚು ಮಾಡುವ ಸಾಮರ್ಥ್ಯ ಇರುವವರಿಗೆ ಮಾತ್ರ ಟಿಕೆಟ್ ಎಂದು ನೀವು ಘೋಷಿಸಿದ ಮೇಲೆ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಸಿಗುತ್ತದೆಯೇ ಎಂದು ಕೇಳಿದೆ?

ಕೆಜಿಎಫ್ ಬಾಬು ಅವರು ಅಫಿಡವಿಟ್ ನಲ್ಲಿ ಘೋಷಿಸಿದ್ದು 1700 ಕೋಟಿ, ಟಿವಿ ಮಾಧ್ಯಮಗಳಲ್ಲಿ ಘೋಷಣೆ ಮಾಡಿದ್ದು 4000 ಕೋಟಿ. ಖರ್ಚು ಮಾಡುವವರಿಗೆ ಮಾತ್ರ ಕಾಂಗ್ರೆಸ್ ಟಿಕೆಟ್ ಎಂದು ಡಿಕೆಶಿ ಘೋಷಿಸಿದ್ದಾರೆ. ಡಿಕೆಶಿಯವರೇ ಹಾಗಾದರೆ 224 ಕ್ಷೇತ್ರಗಳಿಗೂ ನಿಮ್ಮಂತೆ ಅಕ್ರಮದಿಂದ ಕುಬೇರರಾದವರನ್ನೇ ಅಭ್ಯರ್ಥಿಗಳನ್ನಾಗಿ ಮಾಡುತ್ತೀರಾ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...