alex Certify ಅಪ್ಪು ಆತ್ಮಕ್ಕೆ ಶಾಂತಿ ಕೋರಿ ಸೈಕಲ್ ಯಾತ್ರೆ ಮಾಡಿದ ಅಭಿಮಾನಿ; ಯೋಗ ಕ್ಷೇಮ ವಿಚಾರಿಸಿದ ಪತ್ನಿ ಅಶ್ವಿನಿ‌ ಪುನೀತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪು ಆತ್ಮಕ್ಕೆ ಶಾಂತಿ ಕೋರಿ ಸೈಕಲ್ ಯಾತ್ರೆ ಮಾಡಿದ ಅಭಿಮಾನಿ; ಯೋಗ ಕ್ಷೇಮ ವಿಚಾರಿಸಿದ ಪತ್ನಿ ಅಶ್ವಿನಿ‌ ಪುನೀತ್

ನಟ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿ ಹಲವು ದಿನಗಳೇ ಕಳೆದರೂ ಇಂದಿಗೂ ಅಭಿಮಾನಿಗಳು ಅವರಿಗಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಹೀಗೆ ಅಪ್ಪು ಅಭಿಮಾನಿಯೊಬ್ಬ ಬೈಸಿಕಲ್ ಯಾತ್ರೆ ಆರಂಭಿಸಿ ಅದನ್ನು ಯಶಸ್ವಿಗೊಳಿಸಿದ್ದು, ಅವರನ್ನು ಸನ್ಮಾನಿಸಲಾಗಿದೆ.

ಅಪ್ಪು ಅಭಿಮಾನಿ ಗುರುಪ್ರಕಾಶ್ ಎಂಬುವವರು ಹಿಮಾಚಲ ಪ್ರದೇಶದ ಮಣಿಕರಣ್ ದಿಂದ ಅಪ್ಪು ಸಮಾಧಿಯವರೆಗೂ ಬೈಸಿಕಲ್ ಯಾತ್ರೆ ಆರಂಭಿಸಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ಹಾಗೂ ರಾಘಣ್ಣ ಸನ್ಮಾನಿಸಿದ್ದಾರೆ.

ಆ ನಂತರ ಅಶ್ವಿನಿ ಪುನೀತ್ ಅವರು ಕೂಡ ಗುರು ಪ್ರಕಾಶ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ, ಭಾವುಕರಾದರು ಎನ್ನಲಾಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪತಿಯ ನಿಧನದ ನೋವಿನಲ್ಲಿರುವ ಅಶ್ವಿನಿ ಅವರು ಪತಿಯ ಆತ್ಮಕ್ಕೆ ಶಾಂತಿ ಕೋರಿ ಸೈಲಕ್ ತುಳಿದ ವ್ಯಕ್ತಿಯ ಯೋಗಕ್ಷೇಮ ವಿಚಾರಿಸಿದ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...