alex Certify ಬಿಗ್ ನ್ಯೂಸ್: ಸಮೀಕ್ಷೆಯಲ್ಲಿ ಬಯಲಾಯ್ತು ಉಳಿತಾಯ, ನಿವೃತ್ತಿ ಯೋಜನೆ ಕುರಿತಾದ ಆಘಾತಕಾರಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಸಮೀಕ್ಷೆಯಲ್ಲಿ ಬಯಲಾಯ್ತು ಉಳಿತಾಯ, ನಿವೃತ್ತಿ ಯೋಜನೆ ಕುರಿತಾದ ಆಘಾತಕಾರಿ ಮಾಹಿತಿ

ನವದೆಹಲಿ: ಭಾರತೀಯರ ನಿವೃತ್ತಿ ಯೋಜನೆ ಕುರಿತಾಗಿ ಪಿಜಿಐಎಂ ಇಂಡಿಯಾ ಮ್ಯೂಚುವಲ್ ಫಂಡ್ ಸಮೀಕ್ಷೆ ನಡೆಸಿದ್ದು ಇದರಲ್ಲಿ ಆಘಾತಕಾರಿ ಸಂಗತಿ ಗೊತ್ತಾಗಿದೆ.

ನಗರ ಪ್ರದೇಶದ ಜನರಲ್ಲಿ ಉಳಿತಾಯ ಮತ್ತು ಹೂಡಿಕೆ ಕಡಿಮೆಯಾಗಿದೆ. ಆದಾಯದ ಶೇಕಡ 59 ರಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ ಎನ್ನುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ದೇಶದ ಬಹುತೇಕ ಜನ ನಿವೃತ್ತಿ ಕುರಿತಾಗಿ ಯೋಚನೆ ಮಾಡಿಲ್ಲ. ನಿವೃತ್ತಿ ಯೋಜನೆಗೆ ಆದ್ಯತೆ ನೀಡಿಲ್ಲ ಎನ್ನುವುದು ತಿಳಿದುಬಂದಿದೆ.

ಪಿಜಿಐಎಂ 15 ನಗರಗಳಲ್ಲಿ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಜನರ ಸರಾಸರಿ ವಾರ್ಷಿಕ ಆದಾಯ 5.72 ಲಕ್ಷ ರೂಪಾಯಿಗಳು. ಸರಾಸರಿ ವಯಸ್ಸು 44 ವರ್ಷ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡ 51 ರಷ್ಟು ಜನ ತಮ್ಮ ನಿವೃತ್ತಿ ಯೋಜನೆಗೆ ಕುರಿತಂತೆ ಯಾವುದೇ ಹಣಕಾಸು ಯೋಜನೆಯನ್ನೂ ರೂಪಿಸಿಲ್ಲ. ಇನ್ನು ಶೇಕಡ 89 ರಷ್ಟು ಭಾರತೀಯರು ನಿವೃತ್ತಿಗೆ ಯಾವುದೇ ಸಿದ್ಧತೆಯನ್ನು ಕೂಡ ಮಾಡಿಕೊಂಡಿಲ್ಲ ಎಂದು ತಿಳಿದುಬಂದಿದೆ.

ಐವರು ಭಾರತೀಯರಲ್ಲಿ ಒಬ್ಬರು ಮಾತ್ರ ನಿವೃತ್ತಿ ಯೋಜನೆ ಬಗ್ಗೆ ಹೆಚ್ಚಿನ ಗಮನ ನೀಡಿದ್ದಾರೆ. ಶೇಕಡ 41 ರಷ್ಟು ಜನ ನಿವೃತ್ತಿಗಾಗಿ ಜೀವ ವಿಮೆ, ಶೇಕಡ 37 ರಷ್ಟು ಜನ ಸ್ಥಿರ ಠೇವಣಿ ಯೋಜನೆಗೆ ಆದ್ಯತೆ ನೀಡಿದ್ದಾರೆ. ಶೇಕಡ 48ರಷ್ಟು ಜನರಿಗೆ ನಿವೃತ್ತಿ ನಂತರ ಜೀವನಕ್ಕೆ ಎಷ್ಟು ಹಣ ಬೇಕು ಎನ್ನುವುದೇ ತಿಳಿದಿಲ್ಲ.

ಅಂದ ಹಾಗೇ, ಮಕ್ಕಳ ಭವಿಷ್ಯ, ಮನೆ, ಕೆಲಸ, ಕಾರ್ ಮೊದಲಾದವುಗಳ ಬಗ್ಗೆ ಯೋಚಿಸಿ ಹೂಡಿಕೆ ಮಾಡುವ ಜನ ನಿವೃತ್ತಿ ಬಗ್ಗೆ ಮಾತ್ರ ಆಲೋಚನೆ ಮಾಡುವುದಿಲ್ಲ. ನಿವೃತ್ತಿ ನಂತರದ ಜೀವನ ನಡೆಸಲು ಹೂಡಿಕೆ ಮಾಡುವುದನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಸಮಸ್ಯೆ ಉಂಟಾಗುತ್ತದೆ. ಹೂಡಿಕೆ ತಡವಾದರೆ ಮುಂದೆ ಭವಿಷ್ಯಕ್ಕೆ ತೊಂದರೆಯಾಗಬಬಹುದು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...