alex Certify ‘ಲಾಕ್ ಡೌನ್’ ಸಂದರ್ಭದಲ್ಲಿ ರದ್ದಾದ ವಿಮಾನಗಳ ಟಿಕೆಟ್ ದರ ವಾಪಸಾತಿಗೆ ಖಡಕ್ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಾಕ್ ಡೌನ್’ ಸಂದರ್ಭದಲ್ಲಿ ರದ್ದಾದ ವಿಮಾನಗಳ ಟಿಕೆಟ್ ದರ ವಾಪಸಾತಿಗೆ ಖಡಕ್ ಸೂಚನೆ

ಕಳೆದ ವರ್ಷ ಲಾಕ್​ಡೌನ್​​ನಿಂದಾಗಿ ರದ್ದಾಗಿದ್ದ ಟಿಕೆಟ್​​ಗಳ ದರವನ್ನ ಪ್ರಯಾಣಿಕರಿಗೆ ಇನ್ನೂ ಹಿಂದಿರುಗಿಸದ ವಿಮಾನಯಾನ ಸಂಸ್ಥೆಗಳ ವಿರುದ್ಧ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಯಾಣಿಕರಿಗೆ ರದ್ದಾದ ಟಿಕೆಟ್​ ದರ ವಾಪಸ್ಸಾತಿ ಸಂಬಂಧ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಬುಧವಾರ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಸಭೆಯನ್ನ ನಡೆಸಿದ್ರು.

ಹಾಗೂ ಇಲ್ಲಿಯವರೆಗೆ ಟಿಕೆಟ್​ ಹಣ ಹಿಂದಿರುಗಿಸದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರು. ಗೋ ಏರ್​ ಹಾಗೂ ಇಂಡಿಗೋ ವಿಮಾನಯಾನ ಸಂಸ್ಥೆ ಗ್ರಾಹಕರಿಗೆ ಟಿಕೆಟ್​ದರವನ್ನ ಸಂಪೂರ್ಣವಾಗಿ ಹಿಂದಿರುಗಿಸಿದ ಬಗ್ಗೆ ಸಭೆಯಲ್ಲಿ ದಾಖಲೆಯನ್ನ ಒದಗಿಸಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಈ ಹಿಂದೆ ಸುಪ್ರೀಂ ಕೋರ್ಟ್​ ಮಾರ್ಚ್ 31ರೊಳಗಾಗಿ ಲಾಕ್​ಡೌನ್​ ಸಮಯದಲ್ಲಿ ರದ್ದಾದ ಎಲ್ಲಾ ವಿಮಾನ ಟಿಕೆಟ್​ಗಳ ಹಣವನ್ನ ಪ್ರಯಾಣಿಕರಿಗೆ ಹಿಂದಿರುಗಿಸಬೇಕು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಡೆಡ್​​ಲೈನ್​ ನೀಡಿತ್ತು.

ಭಾರತದ ಕಡಿಮೆ ದರದ ವಿಮಾನಯಾನ ಸಂಸ್ಥೆ ಸ್ಪೈಸ್​​ಜೆಟ್​ ತನ್ನೆಲ್ಲ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡುವಲ್ಲಿ ವಿಫಲವಾಗಿದೆ. ಸುಪ್ರೀಂ ಕೋರ್ಟ್​ ಆದೇಶದಂತೆ ನಾವು ಟಿಕೆಟ್​ ಹಣ ಹಿಂದಿರುಗಿಸುವ ಕಾರ್ಯವನ್ನ ಮಾಡುತ್ತಿದ್ದೇವೆ, ಕ್ರೆಡಿಟ್​ ಶೆಲ್​ ಹಣವನ್ನ ಹಿಂದಿರುಗಿಸುವ ಸಲುವಾಗಿಯೇ ಮಾರ್ಚ್ ತಿಂಗಳಲ್ಲಿ ಸ್ಪೈಸ್​ಜೆಟ್​ ಗ್ರಾಹಕರ ಮಾಹಿತಿಯನ್ನ ಕೇಳಿ ಪತ್ರವನ್ನ ಬರೆದಿದೆ ಎಂದು ಸ್ಪೈಸ್​ ಜೆಟ್​ ವಕ್ತಾರ ಹೇಳಿದ್ದಾರೆ.

ನ್ಯಾಷನಲ್​ ಕ್ಯಾರಿಯರ್ ಏರ್​ ಇಂಡಿಯಾ ಟಿಕೆಟ್​ ದರ ಮರುಪಾವತಿಯನ್ನ ಬಾಕಿ ಉಳಿಸಿಕೊಂಡಿದೆ. ಮೂಲಗಳ ಮಾಹಿತಿ ಪ್ರಕಾರ ಏರ್​ ಇಂಡಿಯಾ ಇನ್ನೂ ಸರಿ ಸುಮಾರು 5 ಲಕ್ಷ 25 ಸಾವಿರ ಗ್ರಾಹಕರಿಗೆ ಒಟ್ಟು 2000 ಕೋಟಿ ಹಣವನ್ನ ಹಿಂದಿರುಗಿಸಬೇಕಿದೆ.

ಪ್ರಯಾಣಿಕರ ಬಾಕಿ ಮೊತ್ತವನ್ನ ಪಾವತಿಸುವ ವಿಚಾರದಲ್ಲಿ ಏರ್​ ಇಂಡಿಯಾ ಸುಪ್ರೀಂ ಕೋರ್ಟ್ ಆದೇಶಕ್ಕೆ ಬದ್ಧವಾಗಿದೆ. ಈಗಾಗಲೇ ಈ ಸಂಬಂಧ ಸೂಕ್ತ ಪ್ರಕ್ರಿಯೆಯನ್ನೂ ಆರಂಭಿಸಿದ್ದೇವೆ. ಏಪ್ರಿಲ್​ 1ರ ಒಳಗಾಗಿ ಏರ್​ ಇಂಡಿಯಾ 1 ಸಾವಿರ ಕೋಟಿ ಹಣವನ್ನ ಮರುಪಾವತಿ ಮಾಡಿದೆ. ಸಾಮಾಜಿಕ ಜಾಲತಾಣಗಳ ಮೂಲಕ ನಾವು ಹಣ ಮರುಪಾವತಿ ಮಾಡಬೇಕಾದ ಗ್ರಾಹಕರನ್ನ ವಿಚಾರಿಸುತ್ತಿದ್ದೇವೆ ಎಂದು ಏರ್​ ಇಂಡಿಯಾ ವಕ್ತಾರ ಮಾಹಿತಿ ನೀಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...