
ತಿರುವನಂತಪುರಂ: ಇಲ್ಲಿನ ಸಚಿವಾಲಯದ ಹೊರಗೆ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತರ ಮುಷ್ಕರ 50 ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಕೂದಲು ಕತ್ತರಿಸುವ ಮೂಲಕ ತಮ್ಮ ಆಂದೋಲನವನ್ನು ತೀವ್ರಗೊಳಿಸಿದ್ದಾರೆ.
ಕೇರಳದ ಆಶಾ ಕಾರ್ಯಕರ್ತರು ಮುಷ್ಕರ 50 ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ವಿರುದ್ಧ ಪ್ರತಿಭಟಿಸಿ ಕೂದಲು ಕತ್ತರಿಸಿಕೊಂಡಿದ್ದಾರೆ
ಕಳೆದ 50 ದಿನಗಳಿಂದ ಉತ್ತಮ ಸಂಭಾವನೆಗೆ ಒತ್ತಾಯಿಸಿ ಕೇರಳದ ತಿರುವನಂತಪುರಂನಲ್ಲಿರುವ ಸರ್ಕಾರಿ ಸಚಿವಾಲಯದ ಮುಂದೆ ಆಂದೋಲನ ನಡೆಸುತ್ತಿರುವ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು(ಆಶಾಗಳು), ಸೋಮವಾರ ತಮ್ಮ ಕೂದಲನ್ನು ಕತ್ತರಿಸಿ ಪ್ರತಿಭಟನೆ ನಡೆಸುವುದರ ಮೂಲಕ ತಮ್ಮ ಹೋರಾಟಕ್ಕೆ ಹೊಸ ಆಯಾಮವನ್ನು ನೀಡಿದ್ದಾರೆ.
ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಕಾರಣ, ಪ್ರತಿಭಟನಾಕಾರರ ಒಂದು ಭಾಗವು ಕಳೆದ ವಾರ ಇಲ್ಲಿನ ಪ್ರತಿಭಟನಾ ಸ್ಥಳದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದೆ.
ಪ್ರತಿಭಟನಾ ನಿರತ ಆಶಾ ಕಾರ್ಯಕರ್ತರ ನಾಯಕಿಯರಲ್ಲಿ ಒಬ್ಬರಾದ ಮಿನಿ ಎಸ್., ಸರ್ಕಾರ ಬೇಡಿಕೆಗಳನ್ನು ಸ್ವೀಕರಿಸುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಶಾಖದ ಅಲೆಯ ನಂತರ ಮುಖ್ಯಮಂತ್ರಿ ಪ್ರಾಣಿಗಳು, ಪಕ್ಷಿಗಳು ಮತ್ತು ಇತರ ಜೀವಿಗಳ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದರೆ, ಕಳೆದ 50 ದಿನಗಳಿಂದ ಸುಡುವ ಬಿಸಿಲಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಈ ಆಶಾ ಕಾರ್ಯಕರ್ತರ ಬಗ್ಗೆ ಅವರು ಯಾವುದೇ ಮಾತನ್ನು ಹೇಳಿಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರತಿಭಟನೆಯ ಬಗ್ಗೆ ಮೌನವಾಗಿದ್ದಾರೆ ಎಂದು ಟೀಕಿಸಿದ್ದಾರೆ.