alex Certify ಮಧ್ಯರಾತ್ರಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಪ್ರೇಮಿಗಳು; ಯುವಕನನ್ನು ಕಟ್ಟಿಹಾಕಿ ಇಟ್ರು ಈ ‘ಡಿಮ್ಯಾಂಡ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯರಾತ್ರಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಪ್ರೇಮಿಗಳು; ಯುವಕನನ್ನು ಕಟ್ಟಿಹಾಕಿ ಇಟ್ರು ಈ ‘ಡಿಮ್ಯಾಂಡ್’

ಉತ್ತರ ಪ್ರದೇಶದ ಡಿಯೋರಿಯ ಜಿಲ್ಲೆ ತರ್ಕುಲ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಭಿನ್ನ ಪ್ರಕರಣವೊಂದು ನಡೆದಿದೆ. ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದ ಒಂದೇ ಗ್ರಾಮದ ಯುವಕ – ಯುವತಿ ಮಧ್ಯರಾತ್ರಿ ನಿರ್ಜನ ಪ್ರದೇಶದಲ್ಲಿ ಸಂಧಿಸಲು ಹೋಗಿ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರಿಗೂ ಥಳಿಸಲಾಗಿದ್ದು, ಅಂತಿಮವಾಗಿ ಪ್ರಕರಣ ಸುಖಾಂತ್ಯಗೊಂಡಿದೆ.

ಘಟನೆಯ ವಿವರ: ಗ್ರಾಮದ ಯುವಕ – ಯುವತಿ ಕಳೆದ ಕೆಲ ತಿಂಗಳುಗಳಿಂದ ಪ್ರೀತಿಸುತ್ತಿದ್ದು, ಆರಂಭದಲ್ಲಿ ಇವರಿಬ್ಬರ ಪ್ರೀತಿ ಗುಟ್ಟಾಗಿತ್ತಾದರೂ ಇತ್ತೀಚೆಗೆ ಗುಸು-ಗುಸು ಆರಂಭವಾಗಿತ್ತು. ಹೀಗಾಗಿ ಗ್ರಾಮದ ಕೆಲ ಯುವಕರು ಇವರುಗಳ ಮೇಲೆ ಒಂದು ಕಣ್ಣಿಟ್ಟಿದ್ದು, ಮೂರು ದಿನಗಳ ಹಿಂದೆ ಇವರಿಬ್ಬರು ಗ್ರಾಮದ ಹೊರವಲಯದಲ್ಲಿದ್ದ ಹೊಲದಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರಿಗೂ ಥಳಿಸಿ ಗ್ರಾಮದ ಹಿರಿಯರು ಹಾಗೂ ಯುವಕ – ಯುವತಿಯ ಪೋಷಕರನ್ನು ಸ್ಥಳಕ್ಕೆ ಕರೆಯಿಸಲಾಗಿದೆ. ಆಗ ಯುವತಿ ಕುಟುಂಬಸ್ಥರು, ಯುವಕ ತಮ್ಮ ಮಗಳನ್ನು ಕೂಡಲೇ ಮದುವೆಯಾಗಬೇಕೆಂಬ ಒತ್ತಾಯ ಮುಂದಿಟ್ಟಿದ್ದು, ಆದರೆ ಇದಕ್ಕೆ ಯುವಕನ ಕಡೆಯವರು ನಿರಾಕರಿಸಿದ್ದಾರೆ. ಬೇರೆ ಉಪಾಯವಿಲ್ಲದ ಯುವತಿ ಕುಟುಂಬಸ್ಥರು ಯುವಕನನ್ನು ಒತ್ತೆಯಾಗಿಟ್ಟುಕೊಂಡಿದ್ದಾರೆ.

ಕಡೆಗೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಉಭಯ ಕುಟುಂಬಗಳ ಸದಸ್ಯರು ಒಮ್ಮತಕ್ಕೆ ಬಂದಿದ್ದು, ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗಲು ಒಪ್ಪಿದ್ದಾನೆ. ಈ ವಿಚಾರ ಸ್ಥಳೀಯ ಪೊಲೀಸರ ಗಮನಕ್ಕೂ ಬಂದಿದ್ದು ಆದರೆ ಗ್ರಾಮದ ಹಿರಿಯರೇ ಇದನ್ನು ಬಗೆ ಹರಿಸಿಕೊಂಡಿರುವ ಕಾರಣ ಮಧ್ಯಪ್ರವೇಶಿಸಿಲ್ಲ. ಅಂತಿಮವಾಗಿ ಪ್ರಕರಣ ಸುಖಾಂತ್ಯ ಕಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se