alex Certify ಸ್ಟಾರ್​ ಹೋಟೆಲ್​ ಮೆನುವನ್ನೇ ಬದಲಿಸಿದ ಕೋವಿಡ್​ 19 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಾರ್​ ಹೋಟೆಲ್​ ಮೆನುವನ್ನೇ ಬದಲಿಸಿದ ಕೋವಿಡ್​ 19

ಕೊರೊನಾ ವೈರಸ್​ ದಾಳಿ ಬಳಿಕ ಜನರು ಜೀವ ನಿರೋಧಕ ಶಕ್ತಿಗಳನ್ನ ಹೆಚ್ಚಿಸುವ ಆಹಾರ ಪದಾರ್ಥಗಳ ಕಡೆಗೆ ಒಲವು ತೋರುತ್ತಿದ್ದಾರೆ. ಇದನ್ನರಿತ ಚೆನ್ನೈನ ಸ್ಟಾರ್​ ಹೋಟೆಲ್ ​ಗಳು ತಮ್ಮ ಮೆನುವಿನಲ್ಲಿ ರಾಗಿ-ಬಾದಾಮಿ ಕೇಕ್​, ಬೆಲ್ಲದ ಕೇಕ್​, ಪಂಚ ಧಾನ್ಯಗಳ ಕಿಚಡಿ ಸೇರಿದಂತೆ ತರಹೇವಾರಿ ಇಮ್ಯೂನಿಟಿ ಬೂಸ್ಟರ್​ ಪದಾರ್ಥಗಳನ್ನ ಸೇರಿಸಿಕೊಂಡಿವೆ.

ಕರೊನಾ ವಿರುದ್ಧ ಹೋರಾಡಲಿಕ್ಕೋಸ್ಕರ ಜನರಿಗೆ ಈ ರೀತಿಯ ಹೊಸ ಆಹಾರ ಪದಾರ್ಥಗಳನ್ನ ನೀಡುತ್ತಿದ್ದೇವೆ ಅಂತಾರೆ ಸ್ಟಾರ್​ ಹೋಟೆಲ್​ಗಳ ಬಾಣಸಿಗರು.

ಸೆಣಬಿನ ಬೀಜಗಳಲ್ಲಿ ಅಗಾಧ ಪೋಷಕಾಂಶಗಳು ಅಡಗಿವೆ. ಆದರೆ ಇದನ್ನ ಬಳಕೆ ಮಾಡುವವರೇ ಇಲ್ಲ ಎಂಬಂತಾಗಿದೆ. ಹೀಗಾಗಿ ಈ ಧಾನ್ಯಗಳನ್ನ ಬಳಸಿ ಪಾಸ್ತಾ ಹಾಗೂ ಬ್ರೆಡ್​ಗಳನ್ನ ತಯಾರಿ ಮಾಡಿ ಮಾರಾಟ ಮಾಡುತ್ತಿದ್ದೇವೆ ಅಂತಾ ಹೋಟೆಲ್​ ಮಾಲೀಕ ಗೋಪಿ ತಂಗರಾಜ್​ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...