alex Certify ನೆನಪಿಡಿ….! ಮಿಸ್ ಮಾಡದೆ ಮಾರ್ಚ್ 31ರೊಳಗೆ ಮಾಡಿ ಈ ಎಲ್ಲ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆನಪಿಡಿ….! ಮಿಸ್ ಮಾಡದೆ ಮಾರ್ಚ್ 31ರೊಳಗೆ ಮಾಡಿ ಈ ಎಲ್ಲ ಕೆಲಸ

2020ರ ಆರ್ಥಿಕ ವರ್ಷ ಮುಗಿಯೋಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೀಗಾಗಿ ಈ ಸಾಲಿನ ಅನೇಕ ಸರ್ಕಾರಿ ಕಾರ್ಯಗಳ ಡೆಡ್​​ಲೈನ್​ ಆದ ಮಾರ್ಚ್​ 31 ಸಮೀಪಿಸುತ್ತಿದೆ. ಈ ದಿನದ ಒಳಗಾಗಿ ನೀವು ಮಾಡಿಕೊಳ್ಳಲೇಬೇಕಾದ ಪ್ರಮುಖ ಕಾರ್ಯಗಳ ಪಟ್ಟಿ ಇಲ್ಲಿದೆ ನೋಡಿ.

ಡಬಲ್​ ತೆರಿಗೆಯನ್ನ ತಪ್ಪಿಸಿಕೊಳ್ಳಬೇಕು ಅಂದರೆ ಡಿಕ್ಲರೇಷನ್​ ಸಲ್ಲಿಸಿ.

ಕೊರೊನಾ ವೈರಸ್​ನಿಂದಾಗಿ ಅನಿವಾರ್ಯವಾಗಿ ಭಾರತದಲ್ಲೇ ಉಳಿದುಕೊಂಡಿರುವ ವಿದೇಶಿ ಪ್ರಜೆಗಳು ಹಾಗೂ ಅನಿವಾಸಿಗಳಿಗೆ 2020-21ನೇ ಸಾಲಿನಲ್ಲಿ ಎರಡೆರಡು ತೆರಿಗೆ ಸಲ್ಲಿಕೆ ಮಾಡೋದನ್ನ ತಪ್ಪಿಸುವ ಸಲುವಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ ಮಾರ್ಚ್​ 31ರೊಳಗಾಗಿ ಮಾಹಿತಿ ಸಲ್ಲಿಸುವಂತೆ ಹೇಳಿದೆ.

ಮಾರ್ಚ್​ 3ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ ಡಿಟಿಎಎನಡಿಯಲ್ಲಿ ರಿಲೀಫ್​ ಪಡೆದ ಬಳಿಕವೂ ಅವರು ಡಬಲ್ ತೆರಿಗೆ ಸಂಕಷ್ಟವನ್ನ ಎದುರಿಸುತ್ತಾ ಇದ್ದರೆ ಅಂತಹ ವ್ಯಕ್ತಿಗಳು ಫಾರ್ಮ್​ ಎನ್​ಆರ್​ನ ಅಡಿಯಲ್ಲಿ ಮಾಹಿತಿ ಸಲ್ಲಿಸಬಹುದು.

ಪಾನ್​ ಕಾರ್ಡ್​ – ಆಧಾರ್​ ಕಾರ್ಡ್​ ಲಿಂಕ್​ ಮಾಡಲು ಡೆಡ್​ಲೈನ್​

ಕೊರೊನಾ ವೈರಸ್​ ಸಾಂಕ್ರಾಮಿಕದ ಸಂಕಷ್ಟದ ಹಿನ್ನೆಲೆ ಕೇಂದ್ರ ಸರ್ಕಾರ ಪಾನ್​ – ಆಧಾರ್​ ಲಿಂಕ್​ಗೆ ಇರುವ ಗಡುವನ್ನ ಮಾರ್ಚ್​ 31ರವರೆಗೆ ವಿಸ್ತರಿಸಿತ್ತು. ಈ ಹಿಂದೆ 2020ರ ಜೂನ್​ 30ಕ್ಕೆ ಡೆಡ್​ಲೈನ್​ ನೀಡಲಾಗಿತ್ತು .

ಮಾರ್ಚ್​ 31ರ ಒಳಗಾಗಿ ಪಾನ್​ ಕಾರ್ಡ್​ ಆಧಾರ್​ ಕಾರ್ಡ್​ ಲಿಂಕ್​ ಆಗದೇ ಹೋದಲ್ಲಿ ಏಪ್ರಿಲ್​ 1ರಿಂದ ನಿಮ್ಮ ಪಾನ್​ ಕಾರ್ಡ್​ ನಿಷ್ಕ್ರಿಯಗೊಳ್ಳಲಿದೆ. ಇದಾದ ಬಳಿಕ ನೀವು ಪಾನ್​ ಕಾರ್ಡ್​ನ್ನು ಯಾವುದೇ ಆರ್ಥಿಕ ವ್ಯವಹಾರಕ್ಕೆ ಬಳಕೆ ಮಾಡಲು ಸಾಧ್ಯವಾಗೋದಿಲ್ಲ.

ಎಲ್​ಟಿಸಿ ಕ್ಯಾಶ್​ ವೋಚರ್​ ಸ್ಕೀಮ್​ನಡಿಯಲ್ಲಿ ಬಿಲ್​ ಸಲ್ಲಿಸಿ

ಎಲ್​ಟಿಸಿ ಕ್ಯಾಶ್​ ವೌಚರ್​ ಸ್ಕೀಮ್​ನ ಅಡಿಯಲ್ಲಿ ತೆರಿಗೆ ಲಾಭ ಪಡೆಯಲು ನೀವು ಪ್ಲಾನ್​ ಮಾಡಿದ್ದರೆ ಮಾರ್ಚ್​ 31ರ ಒಳಗಾಗಿ ಜಿಎಸ್​ಟಿ ಮೊತ್ತ ಹಾಗೂ ಜಿಎಸ್​ಟಿ ಸಂಖ್ಯೆ ಹೊಂದಿರುವ ಬಿಲ್​ಗಳನ್ನ ಸಲ್ಲಿಸಿ.ಈ ಸ್ಕೀಮ್​ನ ಅಡಿಯಲ್ಲಿ ಉದ್ಯೋಗಿಯು ಎಲ್‌ಟಿಎ ಶುಲ್ಕವೆಂದು ಪರಿಗಣಿಸಲಾದ ಮೊತ್ತಕ್ಕಿಂತ ಮೂರು ಪಟ್ಟು 12% ಅಥವಾ ಅದಕ್ಕಿಂತ ಹೆಚ್ಚಿನ ಜಿಎಸ್‌ಟಿಯನ್ನು ಆಕರ್ಷಿಸುವ ಸರಕು ಮತ್ತು ಸೇವೆಗಳಿಗೆ ಖರ್ಚು ಮಾಡಬೇಕಾಗುತ್ತದೆ.

2020-21ನೇ ಸಾಲಿನ ಪರಿಷ್ಕೃತ ರಿಟರ್ನ್ಸ್ ಸಲ್ಲಿಕೆ ಮಾಡುವವರು ಮಾರ್ಚ್ 31ರೊಳಗೆ ಈ ಕೆಲಸವನ್ನ ಮುಗಿಸಬೇಕಿದೆ.

ವಿವಾದ್​ ಸೇ ವಿಶ್ವಾಸ್​ ಯೋಜನೆ : ಕೇಂದ್ರ ಸರ್ಕಾರದ ವಿವಾದ್​​ ಸೇ ವಿಶ್ವಾಸ್​ ಯೋಜನೆಗೆ ಈ ಹಿಂದೆ ಫೆಬ್ರವರಿ 26ಕ್ಕೆ ಗಡುವನ್ನ ನೀಡಲಾಗಿತ್ತು. ಆದರೆ ಕೇಂದ್ರಿಯ ನೇರ ತೆರಿಗೆ ಮಂಡಳಿ ವಿವಾದ್​ ಸೇ ವಿಶ್ವಾಸ್​ ಯೋಜನೆಯ ಅಡಿಯಲ್ಲಿ ಫೈಲ್​ ಮಾಡಲು ಮಾರ್ಚ್ 31 ಕೊನೆಯ ಗಡುವನ್ನ ನೀಡಿದೆ. ಈ ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಬಡ್ಡಿ ಇಲ್ಲದೇ ತೆರಿಗೆ ಪಾವತಿ ಮಾಡಲು ಏಪ್ರಿಲ್​ 30, 2021 ಕೊನೆಯ ದಿನಾಂಕವಾಗಿದೆ.

ಸರ್ಕಾರಿ ನೌಕರರು ಮಾರ್ಚ್​ 31ರೊಳಗಾಗಿ 10 ಸಾವಿರ ರೂಪಾಯಿ ಬಡ್ಡಿ ರಹಿತ ವಿಶೇಷ ಮುಂಗಡವನ್ನ ಪಡೆಯಬಹುದಾಗಿದೆ. ಎಲ್​ಟಿಸಿ ನಗದು ಚೀಟಿ ಯೋಜನೆಯೊಂದಿಗೆ ಸರ್ಕಾರ ಅಕ್ಟೋಬರ್​ 2020ರಲ್ಲಿ ಈ ವಿಶೇಷ ಮುಂಗಡವನ್ನ ಘೋಷಿಸಿದೆ. ಸರ್ಕಾರಿ ನೌಕರನಿಗೆ ನೀಡಲಾಗುವ ಈ ವಿಶೇಷ ಮುಂಗಡವನ್ನ ಸರ್ಕಾರ 10 ಕಂತುಗಳಲ್ಲಿ ವಾಪಸ್​ ಪಡೆಯಲಿದೆ.

ಪ್ರಧಾನ ಮಂತ್ರಿ ಆವಾಸ್​ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಸಾಲ ಪಡೆಯಲು ಮಾರ್ಚ್​ 31, 2021 ಕೊನೆಯ ದಿನಾಂಕವಾಗಿದೆ. ಕಡಿಮೆ ಬಡ್ಡಿದರಕ್ಕೆ ಸಾಲ ಸೌಲಭ್ಯ ನೀಡುವ ಮೂಲಕ ಸಾಲಗಾರನಿಗೆ ಕೊಂಚ ರಿಲೀಫ್​ ಸಿಗುತ್ತದೆ.

ಆತ್ಮನಿರ್ಭರ್​ ಭಾರತ್​ ಯೋಜನೆಯ ಅಡಿಯಲ್ಲಿ ಸರ್ಕಾರ ಕಳೆದ ಮೇ 13ರಂದು ತುರ್ತು ಸಾಲದ ಸೌಲಭ್ಯವನ್ನ ಘೋಷಣೆ ಮಾಡಿತು. ವ್ಯಾಪಾರ ಉದ್ದೇಶಕ್ಕೆ ಸಾಲ ಮಾಡಲು ಬಯಸುವವರಿಗೆ ಸಾಲ ಪಡೆಯುವವರು ಮಾರ್ಚ್ 31ರೊಳಗೆ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ಮುಂಗಡ ತೆರಿಗೆ ಪಾವತಿ ಮಾಡುವವರಿಗೂ ಮಾರ್ಚ್ 15 , 2021 ಕೊನೆಯ ದಿನಾಂಕವಾಗಿದೆ. ಈ ದಿನಾಂಕದ ಒಳಗಾಗಿ ಮುಂಗಡ ತೆರಿಗೆ ಪಾವತಿ ಮಾಡಲು ಆಗದವರು ಶೇ. 1ರಷ್ಟು ಬಡ್ಡಿಯನ್ನ ಪಾವತಿ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...