alex Certify BIG NEWS: ಲಾಕ್‌ ಡೌನ್‌ ಸಂದರ್ಭದಲ್ಲೂ ಕಂತು ಕಟ್ಟಿದ ಸಾಲಗಾರರಿಗೆ ಬಂಪರ್‌ – ಕ್ಯಾಶ್‌ ಬ್ಯಾಕ್‌ ನೀಡಲು ಸರ್ಕಾರದ ಚಿಂತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಾಕ್‌ ಡೌನ್‌ ಸಂದರ್ಭದಲ್ಲೂ ಕಂತು ಕಟ್ಟಿದ ಸಾಲಗಾರರಿಗೆ ಬಂಪರ್‌ – ಕ್ಯಾಶ್‌ ಬ್ಯಾಕ್‌ ನೀಡಲು ಸರ್ಕಾರದ ಚಿಂತನೆ

ಮಾರ್ಚ್ 25ರಂದು ಕೇಂದ್ರ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿತ್ತು. ಮಾರ್ಚ್ 31ರಿಂದ ಆಗಸ್ಟ್ ​ವರೆಗೆ ಇಎಂಐ ಕಟ್ಟದೇ ಇರಲು ಆರ್​ಬಿಐ ವಿನಾಯಿತಿ ನೀಡಿತ್ತು.

ಬಳಿಕ ಮೊರಟೋರಿಯಂ​ ಅವಧಿಯಲ್ಲಿ ಬಡ್ಡಿ ಮೇಲಿನ ಬಡ್ಡಿ ಪಾವತಿ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್​ ಬಡ್ಡಿಯ ಮೇಲಿನ ಬಡ್ಡಿ ವಸೂಲಿ ಮಾಡದಂತೆ ಸೂಚನೆ ನೀಡಿತ್ತು. ಇದರಿಂದ ಸರ್ಕಾರದ ಖಜಾನೆಗೆ ಸರಿಸುಮಾರು 7000 ಕೋಟಿ ರೂಪಾಯಿ ಹೊರೆ ಬಿದ್ದಿತ್ತು.

ಆದರೆ ಲಾಕ್​ಡೌನ್​ನಂತಹ ಕಠಿಣ ಪರಿಸ್ಥಿತಿಯಲ್ಲೂ ಮೊರಟೋರಿಯಂ ಲಾಭ ಪಡೆಯದ ಅನೇಕ ಸಾಲಗಾರರು ಬ್ಯಾಂಕ್​ ಗೆ ಸರಿಯಾದ ಸಮಯದಲ್ಲಿ ಬಡ್ಡಿ ಪಾವತಿ ಮಾಡಿದ್ದರು.

ಇದೀಗ ಇಂತಹ ಸಾಲಗಾರರಿಗೆ ಕ್ಯಾಶ್ ​ಬ್ಯಾಕ್​ ಸೌಕರ್ಯ ನೀಡಲು ಕೇಂದ್ರ ಹಣಕಾಸು ಸಚಿವಾಲಯ ನಿರ್ಧರಿಸಿದೆ. ಇದರಿಂದ ಸರಿಯಾದ ಕಂತುಗಳಲ್ಲಿ ಬಡ್ಡಿ ಪಾವತಿಸಿದ ಸಾಲಗಾರರಿಗೆ 6 ತಿಂಗಳ ಸಿಂಪಲ್​ ಲೋನ್​ ಇಂಟರೆಸ್ಟ್‌ ನ ಡಿಫರೆನ್ಸ್ ಲಾಭ ಸಿಗಲಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...