alex Certify ರೈತ ಸಮುದಾಯಕ್ಕೆ ಗುಡ್ ನ್ಯೂಸ್: ‘ಸ್ವಾಮಿತ್ವ’ ಯೋಜನೆಯಡಿ ಆರ್.ಟಿ.ಸಿ. –ಬಜೆಟ್ ಬಗ್ಗೆ ಬಿ.ಸಿ. ಪಾಟೀಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ‘ಸ್ವಾಮಿತ್ವ’ ಯೋಜನೆಯಡಿ ಆರ್.ಟಿ.ಸಿ. –ಬಜೆಟ್ ಬಗ್ಗೆ ಬಿ.ಸಿ. ಪಾಟೀಲ್

ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ 2021-22 ರ ಕೇಂದ್ರ ಬಜೆಟ್ ರೋಗ ನಿಯಂತ್ರಣದ ಜೊತೆಗೆ ಅರ್ಥ ವ್ಯವಸ್ಥೆಯ ಪುನರುಜ್ಜೀವನಕ್ಕೆ ಆಧಾರವಾಗಿದೆ. ಕೃಷಿಗೆ ಹೆಚ್ಚಿನ ಒತ್ತು ನೀಡಿ ಬಜೆಟ್ ಮಂಡಿಸಿರುವುದು ಶ್ಲಾಘನೀಯವಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ 16.50 ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟು, ಎ.ಪಿ.ಎಂ.ಸಿ ಹಾಗೂ ಎಂಎಸ್‍ಪಿ ವ್ಯವಸ್ಥೆ ಮುಂದುವರಿಕೆ ಮತ್ತು ಬಲವರ್ಧನೆಗೆ ಒತ್ತು ನೀಡಲಾಗಿದೆ. ಕೃಷಿ ಮಾರುಕಟ್ಟೆಗಳಿಗೆ ಮೂಲಭೂತ ಸೌಕರ್ಯಗಳಿಗಾಗಿ ನಿಧಿ, ಸೂಕ್ಷ್ಮ ನೀರಾವರಿ ಯೋಜನೆಯ ಅನುದಾನವನ್ನು ದುಪ್ಪಟ್ಟುಗೊಳಿಸಿ 22 ಬೆಳೆಗಳಿಗೆ ಮೌಲ್ಯವರ್ಧನೆ ಯೋಜನೆ ಘೋಷಿಸಿದ್ದು, ರೈತರಿಗೆ ಸಾಕಷ್ಟು  ನೆರವಾಗಲಿದೆ ಎಂದು ತಿಳಿಸಿದ್ದಾರೆ.

2021-22ನೇ ಸಾಲಿನಲ್ಲಿ ನೂತನವಾಗಿ ಸ್ವಾಮಿತ್ವ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆಯಡಿ ಗ್ರಾಮಗಳಲ್ಲಿ ಇರುವ ರೈತರಿಗೆ ತಮ್ಮ ಆಸ್ತಿಗಳ ಆರ್.ಟಿ.ಸಿ. ಗಳನ್ನು ನೀಡಲು ಯೋಜಿಸಲಾಗಿದೆ. ಇಲ್ಲಿಯವರೆಗೆ 1.8 ಲಕ್ಷ ಗ್ರಾಮೀಣ ಭಾಗದ ಜನರ ಆಸ್ತಿ ಮಾಲೀಕರುಗಳಿಗೆ 1241 ಗ್ರಾಮಗಳಲ್ಲಿ ಆರ್.ಟಿ.ಸಿ. ಗಳನ್ನು ನೀಡಲಾಗಿದೆ.  ಈ ಯೋಜನೆಯನ್ನು 2021-22ರಲ್ಲಿ ದೇಶದ ಎಲ್ಲಾ ರಾಜ್ಯಗಳ ಪ್ರತಿ ಗ್ರಾಮಗಳಿಗೂ ವಿಸ್ತರಿಸಲಾಗುವುದು.

2021-22ನೇ ಸಾಲಿಗೆ ಕೃಷಿ ಸಾಲದ ಮೊತ್ತವನ್ನು 16.5 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಮೂಲಸೌಕರ್ಯಕ್ಕಾಗಿ ಹಿಂದಿನ ಸಾಲಿನಲ್ಲಿ ನೀಡಿದ 30,000 ಕೋಟಿ ರೂಪಾಯಿಗಳನ್ನು 40,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಸೂಕ್ಷ್ಮ ನೀರಾವರಿ ನಿಧಿ(ಮೈಕ್ರೋ ಇರಿಗೇಷನ್ ಫಂಡ್) 2019-20ನೇ ಸಾಲಿನಲ್ಲಿ 5,000 ಕೋಟಿ ರೂ. ಇರುವುದನ್ನು ನಬಾರ್ಡ್ ಮೂಲಕ 10,000 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ.

ಕೃಷಿಯಲ್ಲಿ ಮೌಲ್ಯವರ್ಧನೆಯನ್ನು ಪ್ರೋತ್ಸಾಹಿಸಲು 22 ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಲು “ಆಪರೇಷನ್ ಗ್ರೀನ್” ಯೋಜನೆ ಪ್ರಾರಂಭಿಸಲಾಗಿದೆ. 1.68 ಲಕ್ಷ ಕೋಟಿ ರೈತರು ಆನ್‍ಲೈನ್ ಪೋರ್ಟಲ್ ಮೂಲಕ 1.14 ಕೋಟಿ ರೂಪಾಯಿಗಳ ವಹಿವಾಟನ್ನು ನಮ್ಮ ರೈತರು ಅನ್‍ಲೈನ್ ಮೂಲಕ ಮಾಡಿರುತ್ತಾರೆ. 2021-22ನೇ ಸಾಲಿನಲ್ಲಿ ರಾಷ್ಟ್ರದ ಒಂದು ಸಾವಿರ ಮಂಡಿಗಳನ್ನು ಪೋರ್ಟಲ್‍ಗೆ ಜೋಡಿಸಲಾಗುವುದು. ಕೃಷಿ ಮೂಲ ಸೌಕರ್ಯ ನಿಧಿಯನ್ನು ಕೃಷಿ ಮಾರುಕಟ್ಟೆಗಳ(ಎ.ಪಿ.ಎಂ.ಸಿ) ಬಲವರ್ದನೆಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಬಿ.ಸಿ. ಪಾಟೀಲ್ ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Rozhodník pre oriešky: nájdete ihlu v kope sena za 8 Zložitá optická ilúzia: Hľadanie 6 zvierat v záhrade Znajdź owcę wśród setek kóz: fascynująca zagadka dla najbardziej