alex Certify ಹವಾಮಾನ ಆಧಾರಿತ ʼಬೆಳೆ ವಿಮೆʼ ಕುರಿತು ರೈತರಿಗೊಂದು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹವಾಮಾನ ಆಧಾರಿತ ʼಬೆಳೆ ವಿಮೆʼ ಕುರಿತು ರೈತರಿಗೊಂದು ಮಹತ್ವದ ಮಾಹಿತಿ

ರೈತರೇ ಇತ್ತ ಗಮನಿಸಿ. ನಿಮಗೊಂದು ಮಹತ್ವದ ಮಾಹಿತಿ ಇದೆ. ಹವಾಮಾನ ಆಧಾರಿತ ತೋಟಗಾರಿಕೆ ಬೆಳೆಗಳಿಗೆ ವಿಮೆ ಸೌಲಭ್ಯ ಪಡೆಯಲು ಫಸಲ್ ಬಿಮಾ ಯೋಜನೆಯಡಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.

ಹೌದು, ಹವಾಮಾನ ಆಧಾರಿತ ಬೆಳೆಗಳಾದ ದ್ರಾಕ್ಷಿ, ಅಡಿಕೆ, ಪರಂಗಿ, ದಾಳಿಂಬೆ, ಮಾವು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಸೌಲಭ್ಯ ಪಡೆಯಲು ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಅರ್ಜಿ ಆಹ್ವಾನ ಮಾಡಿದೆ. ದ್ರಾಕ್ಷಿ, ಅಡಕೆ, ಪರಂಗಿ, ದಾಳಿಂಬೆ ಬೆಳೆಗಾರರು ಜುಲೈ 10 ರೊಳಗೆ, ಮಾವು ಬೆಳೆಗಾರರು ಜುಲೈ 31 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನು ನಿಮಗೇನಾದರೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಥವಾ ಗ್ರಾಹಕರು ದೂರುಗಳನ್ನು ಸಲ್ಲಿಸಬೇಕಾದಲ್ಲಿ ಸಹಾಯವಾಣಿ 18004250505 ಕರೆ ಮಾಡಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಅಥವಾ ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ. ವಲಯ ಕಚೇರಿ, 3ನೇ ಮಹಡಿ, ನಂ.18, ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಕಟ್ಟಡ, ನೃಪತುಂಗ ರಸ್ತೆ, ಹಡ್ಸನ್ ವೃತ್ತ. ದೂರವಾಣಿ: 080 22115158/5390 ಇಲ್ಲಿಗೂ ಸಂಪರ್ಕ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...