alex Certify ಬೀದಿ ಬದಿ ಆಹಾರ ಮಾರಾಟಗಾರರಿಗೆ ಕೇಂದ್ರ ಸರ್ಕಾರದಿಂದ ʼಬಂಪರ್ʼ‌ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿ ಬದಿ ಆಹಾರ ಮಾರಾಟಗಾರರಿಗೆ ಕೇಂದ್ರ ಸರ್ಕಾರದಿಂದ ʼಬಂಪರ್ʼ‌ ಸುದ್ದಿ

ವ್ಯವಹಾರ ದೊಡ್ಡದಿರಲಿ, ಸಣ್ಣದಿರಲಿ ಕೊರೊನಾ ಎಲ್ಲರನ್ನು ಹೈರಾಣಗೊಳಿಸಿದೆ. ಬೀದಿಬದಿ ವ್ಯಾಪಾರಿಗಳ ಗೋಳು ಹೆಚ್ಚಾಗಿದೆ. ಅವರ ಪರಿಸ್ಥಿತಿ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಪಿಎಂ ಸ್ವಾನಿಧಿ ಯೋಜನೆಯಲ್ಲಿ ಬೀದಿ ಬದಿ ಆಹಾರ ಮಾರಾಟಗಾರರನ್ನು ಜೋಡಿಸುವ ಅಭಿಯಾನ ಶುರು ಮಾಡಿದ್ದಾರೆ.

ಈ ಅಭಿಯಾನದಡಿ ಬೀದಿ ಆಹಾರ ಮಾರಾಟಗಾರರಿಗೆ ಆನ್‌ಲೈನ್ ವೇದಿಕೆ ನೀಡಲಾಗುವುದು. ಸ್ವಿಗ್ಗಿಯಂತಹ ದೊಡ್ಡ ಕಂಪನಿಯೊಂದಿಗೆ ಕೈ ಜೋಡಿಸುವ ಮೂಲಕ ಅವರ ವ್ಯವಹಾರವನ್ನು ವಿಸ್ತರಿಸಲು ಅವರಿಗೆ ಅವಕಾಶ ನೀಡಲಾಗುವುದು. ಆದರೆ ಈ ಯೋಜನೆಯ ಲಾಭ ಪಡೆಯಲು, ಬೀದಿ ಬದಿ ಆಹಾರ ಮಾರಾಟಗಾರರು ಪ್ರಮುಖ ಕೆಲಸಗಳನ್ನು ಮಾಡಬೇಕು.

ಪಿಎಂ ಸ್ವಾನಿಧಿ ಯೋಜನೆಯಡಿ, ಬೀದಿ ಬದಿ ಆಹಾರ ಮಾರಾಟಗಾರರು ಮೊದಲು ಪಾನ್ ಸಂಖ್ಯೆಯನ್ನು ಪಡೆಯಬೇಕಾಗುತ್ತದೆ. ನಂತರ ಎಫ್‌ಎಸ್‌ಎಸ್‌ಎಐನಲ್ಲಿ ನೋಂದಣಿ ಮಾಡಬೇಕಾಗಿದೆ. ಅಪ್ಲಿಕೇಶನ್ ಬಳಸಲು, ಮೆನುವನ್ನು ಡಿಜಿಟಲೀಕರಣಗೊಳಿಸಲು ತಾಂತ್ರಿಕ ತರಬೇತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರ ಈ ತರಬೇತಿಯನ್ನು ನೀಡಲಿದೆ.

ಪ್ರತಿ ಆಹಾರದ ಬೆಲೆಯನ್ನು ನಿರ್ಧರಿಸಬೇಕಾಗುತ್ತದೆ. ಪ್ಯಾಕಿಂಗ್ ಪ್ರಕ್ರಿಯೆಯನ್ನು ಸುಧಾರಿಸಬೇಕಾಗುತ್ತದೆ. ಇದರ ನಂತರ ಅಂಗಡಿಯವರಿಗೆ ಆನ್‌ಲೈನ್ ಆಹಾರ ವಿತರಣಾ ಕ್ಷೇತ್ರದಲ್ಲಿ ಹೆಸರುವಾಸಿಯಾದ ಸ್ವಿಗ್ಗಿ ಕಂಪನಿಯೊಂದಿಗೆ ಸಂಪರ್ಕಿಸಲಾಗುವುದು. ಬೀದಿ ಬದಿ ಆಹಾರ ಮಾರಾಟಗಾರರನ್ನು ತಾಂತ್ರಿಕವಾಗಿ ಸಬಲೀಕರಣಗೊಳಿಸುವುದು ಮಾತ್ರವಲ್ಲದೆ ಅವರ ಆದಾಯಕ್ಕೆ ಹೊಸ ಮಾರ್ಗಗಳನ್ನು ತೆರೆಯುವುದು ಇದರ ಹಿಂದಿನ ಉದ್ದೇಶವಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти Найдите 3 различия на картинках с зайцами для людей Как пройти по крыше: