alex Certify ಬಾಲಿವುಡ್ ಚಿತ್ರರಂಗದ ಹುಳಕನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಚಿತ್ರರಂಗದ ಹುಳಕನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಟ

ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬಾಲಿವುಡ್ ಚಿತ್ರರಂಗವನ್ನು ಬೆಚ್ಚಿಬೀಳುವಂತೆ ಮಾಡಿದ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಅಶ್ರುತರ್ಪಣ ಸಲ್ಲಿಸುತ್ತಲೇ ತಾವು ಬಾಲಿವುಡ್ ನಿಂದ ದೂರ ಸರಿದಿದ್ದರ ಹಿಂದಿನ ಕಾರಣವನ್ನು ನಟ ಸಾಹಿಲ್ ಖಾನ್ ಬಿಚ್ಚಿಟ್ಟಿದ್ದಾರೆ.

2001ರಲ್ಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ಸಾಹಿಲ್, ಫಿಟ್ನೆಸ್ ನಿಂದಲೇ ಅಪಾರ ಜನಪ್ರೀತಿ ಗಳಿಸಿದ್ದರು. ಆದರೂ ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಯಶ ಕಾಣಲಿಲ್ಲ, ಹೀಗಾಗಿ ಅವರು ಈ ಉದ್ಯಮದಿಂದ ದೂರವುಳಿದಿದ್ದರು. ಇದೀಗ ಸುಶಾಂತ್ ನಿಧನದ ಬಳಿಕ ತಮ್ಮ ಗುಟ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತನ್ನ ಮೊದಲ ಚಿತ್ರ ಸ್ಟೈಲ್ ಬಳಿಕ ಫಿಲಂ ಮ್ಯಾಗಜೀನ್ ನಲ್ಲಿ ಪೋಸ್ಟರ್ ಆಗಿದ್ದು ಸೇರಿದಂತೆ ಚಿತ್ರರಂಗದ ಮಂದಿ ತಮ್ಮನ್ನು ಯಾವ ರೀತಿ ಬಳಸಿಕೊಂಡು ಕೈಬಿಟ್ಟರು, ಚಿತ್ರಗಳಿಂದ ನನ್ನನ್ನು ಹೇಗೆ ತೆಗೆಸಿ ಹಾಕಿದರು ಎಂಬುದನ್ನು ಕೂಡ ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...