alex Certify ಸಂಕಷ್ಟ ಹೊತ್ತಲ್ಲಿ ಜಗ್ಗೇಶ್ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕಷ್ಟ ಹೊತ್ತಲ್ಲಿ ಜಗ್ಗೇಶ್ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ

ಬೆಂಗಳೂರು: ನಟ ನವರಸ ನಾಯಕ ಜಗ್ಗೇಶ್ ಅವರು ಕೊರೋನಾ ಸಂಕಷ್ಟದಲ್ಲಿ ತೊಂದರೆಯಲ್ಲಿರುವವರಿಗೆ ಸಹಾಯ ಹಸ್ತ ಚಾಚಿದ್ದಾರೆ. ತುರ್ತು ಅಗತ್ಯವಿದ್ದ ಸೋಂಕಿತರೊಬ್ಬರಿಗೆ ನಿಗದಿತ ಸಮಯಕ್ಕೆ ಆಕ್ಸಿಜನ್ ಒದಗಿಸುವ ಮೂಲಕ ಪ್ರಾಣ ರಕ್ಷಿಸಿದ್ದಾರೆ.

ನಾಗೇಂದ್ರ ಭಟ್ ಎಂಬುವವರಿಗೆ ಆಕ್ಸಿಜನ್ ಕೊರತೆಯಾಗಿದ್ದು, ಅವರ ಪ್ರಾಣಕ್ಕೆ ಅಪಾಯವಿತ್ತು. ಅವರ ಮಗಳು ಜಗ್ಗೇಶ್ ಅವರಿಗೆ ಆಕ್ಸಿಜನ್ ಒದಗಿಸಲು ಮನವಿ ಮಾಡಿದ್ದು, ಕೂಡಲೇ ಕ್ರಮ ಕೈಗೊಂಡ ಜಗ್ಗೇಶ್, ಆಪ್ತರ ನೆರವಿನಿಂದ ಆಕ್ಸಿಜನ್ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. 1 ಗಂಟೆ ತಡವಾಗಿದ್ದರೂ ನಾಗೇಂದ್ರ ಭಟ್ ಅವರ ಜೀವಕ್ಕೆ ಅಪಾಯ ಇತ್ತು. ಇದಕ್ಕಾಗಿ ಸಹಕಾರ ನೀಡಿದ ಆಸ್ಪತ್ರೆಯವರು ಮತ್ತು ಸಿಬ್ಬಂದಿ, ಆಪ್ತರಿಗೆ ಜಗ್ಗೇಶ್ ಧನ್ಯವಾದ ಹೇಳಿದ್ದಾರೆ‌.

ಕೊರೊನಾ ಸಂಕಷ್ಟದ ಹೊತ್ತಲ್ಲಿ ಜಗ್ಗೇಶ್ ಸಂಕಷ್ಟದಲ್ಲಿರುವ ಸೋಂಕಿತರಿಗೆ ನೆರವಾಗುತ್ತಿದ್ದಾರೆ. ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...