alex Certify ನಟ ಅನಿರುದ್ಧ್ ಪ್ರಕರಣ: ಫಿಲ್ಮ್ ಇಂಡಸ್ಟ್ರಿಯಲ್ಲಿ ಬ್ಯಾನ್ ಪದಬಳಕೆ ಅಧಿಕಾರ ಯಾರಿಗೂ ಇಲ್ಲ: ಭಾ.ಮಾ. ಹರೀಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ಅನಿರುದ್ಧ್ ಪ್ರಕರಣ: ಫಿಲ್ಮ್ ಇಂಡಸ್ಟ್ರಿಯಲ್ಲಿ ಬ್ಯಾನ್ ಪದಬಳಕೆ ಅಧಿಕಾರ ಯಾರಿಗೂ ಇಲ್ಲ: ಭಾ.ಮಾ. ಹರೀಶ್

ಬೆಂಗಳೂರು: ಕಿರುತೆರೆ ನಿರ್ಮಾಪಕರು -ನಟ ಅನಿರುದ್ಧ್ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಬೆಳಗ್ಗೆ 10.30 ಕ್ಕೆ ಇಬ್ಬರ ಜೊತೆಯೂ ಸಭೆ ನಡೆಸಲಾಗುವುದು. ನಾಳೆ ಸಭೆಯ ನಂತರ ಎಲ್ಲವೂ ಸುಖಾಂತ್ಯವಾಗಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ. ಹರೀಶ್ ಹೇಳಿದ್ದಾರೆ.

ಫಿಲ್ಮ್ ಚೇಂಬರ್ ನಲ್ಲಿ ಅನಿರುದ್ಧ್ ಜೊತೆಗೆ ಚರ್ಚೆ ನಡೆಸಿದ ಬಳಿಕ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಏನೇನು ಆಗಿದೆ ಎಂದು ನಟ ಅನಿರುದ್ಧ್ ಎಲ್ಲವನ್ನು ಹೇಳಿದ್ದಾರೆ. ಕಿರುತೆರೆ ನಿರ್ಮಾಪಕರ ಜೊತೆಯೊ ಕಾನ್ಫರೆನ್ಸ್ ಕಾಲ್ ನಲ್ಲಿ ಚರ್ಚೆ ನಡೆಸಿದ್ದೇವೆ. ನಾಳೆ ಬೆಳಗ್ಗೆ ಇಬ್ಬರನ್ನು ಕೂರಿಸಿ ಮಾತುಕತೆ ನಡೆಸುತ್ತೇವೆ ಎಂದರು.

ನಿರ್ಮಾಪಕರು ಒಬ್ಬ ಕಲಾವಿದನನ್ನು ತೆಗೆದು ಹಾಕಬಹುದು. ಆದರೆ, ಬೇರೊಂದು ಕಡೆ ಕೆಲಸ ಮಾಡಬಾರದೆಂದು ಹೇಳಬಾರದು, ಕಿರುತೆರೆ ನಿರ್ಮಾಪಕರ ಉದ್ದೇಶ ಏನೆಂದು ನಾಳೆ ಕರೆದು ಚರ್ಚಿಸುತ್ತೇವೆ. ಫಿಲ್ಮ್ ಇಂಡಸ್ಟ್ರಿಯಲ್ಲಿ ಬ್ಯಾನ್ ಅನ್ನುವ ಪದ ಇಲ್ಲ. ಬ್ಯಾನ್ ಅನ್ನುವ ಪದ ಬಳಸುವ ಅಧಿಕಾರ ಯಾರಿಗೂ ಇಲ್ಲ ಎಂದು ಭಾ.ಮಾ. ಹರೀಶ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Najít kočku: vrcholový test pozornosti на Kde se skrývá autíčko: jen ti nejpozornější ho najdou Vynikající jemné Jak najít měsíc v koláčcích za 7 sekund: výzva