alex Certify ಅಕ್ರಮ ಸಂಬಂಧ ಶಂಕೆ: ತಲಾಖ್ ಪಡೆದ ಬೆನ್ನಲ್ಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಸಂಬಂಧ ಶಂಕೆ: ತಲಾಖ್ ಪಡೆದ ಬೆನ್ನಲ್ಲೇ ಘೋರ ಕೃತ್ಯ

ಬೆಂಗಳೂರು: ಅಕ್ರಮ ಸಂಬಂಧದ ಶಂಕೆಯಿಂದ ಪತ್ನಿಯ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ ಘಟನೆ ಜೆಪಿ ನಗರ ಸಮೀಪ ನಡೆದಿದೆ.

ಸಿಲ್ವರ್ ಓಕ್ ಸ್ತ್ರೀಟ್ ನಿವಾಸಿ 46 ವರ್ಷದ ನಜೀನಾ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಬಟ್ಟೆ ವ್ಯಾಪಾರಿಯಾಗಿರುವ ಪತಿ ಕಲೀಂ ಶರೀಫ್ ಕೊಲೆ ಆರೋಪಿಯಾಗಿದ್ದು ಆತನನ್ನು ಬಂಧಿಸಲಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಮದುವೆಯಾಗಿರುವ ದಂಪತಿಗೆ ಐವರು ಮಕ್ಕಳಿದ್ದಾರೆ. ಇತ್ತೀಚೆಗೆ ಅವರ ನಡುವೆ ಮನಸ್ತಾಪವಾಗಿ ಗಲಾಟೆ ನಡೆದಿತ್ತು. ಪತ್ನಿ ಅಕ್ರಮ ಸಂಬಂಧ ಹೊಂದಿರುವುದಾಗಿ ಶರೀಫ್ ಮನೆಯಲ್ಲಿ ಜಗಳವಾಡುತ್ತಿದ್ದ ಎನ್ನಲಾಗಿದೆ.

ಬೇಸರಗೊಂಡ ನಜೀನಾ ಕಳೆದ ತಿಂಗಳು ಮನೆ ಬಿಟ್ಟು ಹೋಗಿ ಮರಳಿದ್ದಳು. ಇಬ್ಬರು ಒಮ್ಮತದಿಂದ ಬೇರೆಯಾಗಲು ನಿರ್ಧರಿಸಿ ಬನ್ನೇರುಘಟ್ಟ ರಸ್ತೆಯ ಪ್ರಾರ್ಥನಾ ಮಂದಿರದಲ್ಲಿ ಬುಧವಾರ ಬೆಳಿಗ್ಗೆ ತಲಾಖ್ ಪಡೆದು ಮನೆಗೆ ಮರಳಿದ್ದಾರೆ. ಮಧ್ಯಾಹ್ನ ಮನೆಯಲ್ಲಿ ಮತ್ತೆ ಗಲಾಟೆ ಆರಂಭವಾಗಿ ಶರೀಫ್ ಚಾಕುವಿನಿಂದ ಕುತ್ತಿಗೆ ಕೊಯ್ದು ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jak se Jak teplota vody Proč semena papriky neklíčí a jak Vědci objevili nejzdravější sacharidy Vepřový jazyk: Tajemství přípravy lahodné lahůdky Odborník na výživu přináší