ಬೆಂಗಳೂರು : ಜಮ್ಮು – ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರೂ. 50,00,000 ( ಐವತ್ತು ಲಕ್ಷ ) ಪರಿಹಾರಧನವನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ. ಸರ್ಕಾರದ ಉಲ್ಲೇಖಿತ ಆದೇಶದ ಮೇರೆಗೆ ಈ ಕೆಳಗೆ ಸಹಿ ಮಾಡಿದವರು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕ್ಯಾಫ್ಟನ್ ಪ್ರಾಂಜಲ್ ಎಮ್.ವಿ. ಇವರು ರೈಫಲ್ಸ್ ಸೇವೆಯಲ್ಲಿದ್ದಾಗ ಜಮ್ಮು ಮತ್ತು ಕಾಶ್ಮೀರದ ರೆಜರಿ ಸೆಕ್ಸರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಉಗ್ರವಾದಿಗಳೊಂದಿಗಿನ ಹೋರಾಟದಲ್ಲಿ ದಿನಾಂಕ 20-11-2023 ರಂದು ಯುದ್ಧ/ಯುದ್ಧದಂತಹ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿರುವ ಹಿನ್ನಲೆಯಲ್ಲಿನ ಇವರ ಅವಲಂಬಿತರಿಗೆ 50 ಲಕ್ಷ ರೂ. (ರೂಪಾಯಿ ಐವತ್ತು ಲಕ್ಷ ಮಾತ್ರ) ಗಳ ಅನುಗ್ರಹ ಪೂರ್ವಕ ಅನುದಾನವನ್ನು ಮಂಜೂರು ಮಾಡಲಾಗಿದೆ.
https://twitter.com/CMofKarnataka/status/1731738222844387549?ref_src=twsrc%5Etfw%7Ctwcamp%5Etweetembed%7Ctwterm%5E1731738222844387549%7Ctwgr%5E5d09de875ed19cb2984f0398eacaa06d5b13362c%7Ctwcon%5Es1_c10&ref_url=https%3A%2F%2Fapi-news.dailyhunt.in%2F