alex Certify ಜೀವನದಲ್ಲಿ ಸಮಸ್ಯೆಗಳು ಕಾಡುತ್ತಿದ್ದರೆ ಮಂಗಳವಾರದಂದು ಈ ಪರಿಹಾರ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನದಲ್ಲಿ ಸಮಸ್ಯೆಗಳು ಕಾಡುತ್ತಿದ್ದರೆ ಮಂಗಳವಾರದಂದು ಈ ಪರಿಹಾರ ಮಾಡಿ

ಮನುಷ್ಯರೆಂದ ಮೇಲೆ ಸಮಸ್ಯೆಗಳು ಬರುವುದು ಸಹಜ. ಆದರೆ ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ ಅದರಿಂದ ಮನುಷ್ಯ ಜೀವನದಲ್ಲಿ ಏಳಿಗೆ ಕಾಣಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಮಂಗಳವಾರದಂದು ಈ ಒಂದು ಪರಿಹಾರವನ್ನು ಮಾಡಿ.

ಮನುಷ್ಯನಿಗೆ ಜೀವನದಲ್ಲಿ ಹಣಕಾಸಿನ ಸಮಸ್ಯೆ, ಅನಾರೋಗ್ಯದ ಸಮಸ್ಯೆ, ವ್ಯಾಪಾರದಲ್ಲಿ ಸಮಸ್ಯೆಗಳು ಎದುರಾಗುತ್ತಿರುತ್ತದೆ. ಆ ವೇಳೆ ನೀವು ದೈವಬಲವನ್ನು ಪಡೆಯಬೇಕು. ಇದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.

ಅದಕ್ಕಾಗಿ ಮಂಗಳವಾರದಂದು ನಿಮ್ಮ ಮನೆಯ ಹತ್ತಿರವಿರುವ ಶ್ವಾನಗಳಿಗೆ ಗೋಧಿ ಹಿಟ್ಟಿನಿಂದ ತಯಾರಿಸಿದ ಆಹಾರಗಳಿಗೆ 4 ಹನಿ ಎಳ್ಳೆಣ್ಣೆ ಮಿಕ್ಸ್ ಮಾಡಿ ಕೊಡಬೇಕು. ಇದರಿಂದ ನಿಮ್ಮ ಸಮಸ್ಯೆಗಳೆಲ್ಲಾ ದೂರವಾಗುತ್ತದೆ.

ಹಾಗೇ ಹಸುವಿಗೆ ನೆನೆಸಿದ ಕಡಲೆಕಾಳನ್ನು ಬೆಲ್ಲದೊಂದಿಗೆ ತಿನ್ನಿಸಬೇಕು ಅಥವಾ ಹಸಿರು ಹುಲ್ಲನ್ನು ಬೆಲ್ಲದೊಂದಿಗೆ ತಿನ್ನಿಸಿ. ಇದರಿಂದಲೂ ಕೂಡ ಸಮಸ್ಯೆಗಳು ನಿವಾರಣೆಯಾಗಿ ಜೀವನದಲ್ಲಿ ಏಳಿಗೆ ಕಾಣುತ್ತೀರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...