ಬೆಂಗಳೂರು : ಡ್ರೋನ್ ಪ್ರತಾಪ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ಸಲ್ಲಿಕೆಯಾಗಿದೆ.
ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುತ್ತೇನೆ ಎಂದು ನಂಬಿಸಿ ಡ್ರೋನ್ ಪ್ರತಾಪ್ 2 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಚಂದನ್ ಕುಮಾರ್ ಗೌಡ ಎಂಬುವವರು ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ನನಗೆ ಬಹಳ ಪರಿಚಯರು, ಆಗಾಗ ಅವರನ್ನು ಫಾರ್ಮ್ ಹೌಸ್ ನಲ್ಲಿ ಭೇಟಿ ಮಾಡುತ್ತೇನೆ. ನಾನು ಹೆಚ್ಡಿಕೆ ಆಗಾಗ ಭೇಟಿ ಮಾಡುತ್ತಿರುತ್ತೇವೆ. ನಿಮಗೆ ಖಂಡಿತವಾಗಿ ಜಿಲ್ಲಾ ಪಂಚಾಯತ್ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿ ಡ್ರೋನ್ ಪ್ರತಾಪ್ 2 ಲಕ್ಷ ಹಣ ಪಡೆದು ವಂಚಿಸಿದ್ದಾರೆ. ಪ್ರತಾಪ್ ಹಾಗೂ ಚಂದನ್ ಅವರು ಫೋನ್ ನಲ್ಲಿ ಮಾತನಾಡಿರುವ ಸಂಭಾಷಣೆಯ ಆಡಿಯೋ ಕೂಡ ವೈರಲ್ ಆಗಿದೆ.
ನನ್ನ ಜೊತೆ ಫಾರ್ಮ್ ಹೌಸ್ ಗೆ ಬಾ ಕುಮಾರಸ್ವಾಮಿ ಪರಿಚಯ ಮಾಡಿ ಕೊಡ್ತೀನಿ, ಕುಮಾರಸ್ವಾಮಿ ಬಹಳ ಒಳ್ಳೆಯ ಮನುಷ್ಯ..ಅವರ ಬಳಿ ಹೋದರೆ ಕೆಲಸ ಪಕ್ಕಾ ಎಂದು ಡ್ರೋನ್ ಪ್ರತಾಪ್ ಚಂದನ್ ಗೆ ಕಾಗೆ ಹಾರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಟ್ಟಿನಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಹಲವು ವಂಚನೆ ಆರೋಪಗಳು ಕೇಳಿಬಂದಿದ್ದು, ಹಲವು ದೂರುಗಳು ದಾಖಲಾಗಿದೆ.