ಕೋಲಾರದಲ್ಲಿ : ದುಷ್ಕರ್ಮಿಗಳು ಶ್ರೀ ರಾಮನ ಕಟೌಟ್, ಫ್ಲೆಕ್ಸ್ ಹರಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲಿನ ಗುಣಗಂಟೆ ಪಾಳ್ಯದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಗುಣಗಂಟೆ ಪಾಳ್ಯದಲ್ಲಿ ಯುವಕರು ಹಾಕಿದ್ದ ಶ್ರೀ ರಾಮನ ಕಟೌಟ್, ಫ್ಲೆಕ್ಸ್ ನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಸಂಸದ ಮುನಿಸ್ವಾಮಿ ಸೇರಿ ಮತ್ತಿತರರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಜ.22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ, ಸಂಕ್ರಾಂತಿ ಹಿನ್ನೆಲೆ ಭಕ್ತರು ಮುಳಬಾಗಿಲಿನ ಗುಣಗಂಟೆ ಪಾಳ್ಯದಲ್ಲಿ ಶ್ರೀ ರಾಮನ ಕಟೌಟ್, ಫ್ಲೆಕ್ಸ್ ಅಳವಡಿಸಿದ್ದರು.