alex Certify ಪುಟ್ಟ ಬಾಲಕನ ತಲೆ ಕತ್ತರಿಸಿ ಬರ್ಬರ ಹತ್ಯೆ; ಅಪ್ರಾಪ್ತ ವಯಸ್ಸಿನ ಆರೋಪಿ ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನ ತಲೆ ಕತ್ತರಿಸಿ ಬರ್ಬರ ಹತ್ಯೆ; ಅಪ್ರಾಪ್ತ ವಯಸ್ಸಿನ ಆರೋಪಿ ಅಂದರ್

ಶ್ರದ್ಮಾಕವೂರ್ ಪ್ರಕರಣ  ಇನ್ನೂ ಜನರ ಮನಸ್ಸಿನಿಂದ ಮರೆಯಾಗಿಲ್ಲ. ಆ ಘಟನೆ ನಂತರ ಒಂದಾದ ಮೇಲೆ ಒಂದು ಇದೇ ರೀತಿಯ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇದೆ.

ಈಗ ಇದೇ ರೀತಿಯ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಆಟ ಆಡುತ್ತಿದ್ದ ಮೂರು ವರುಷದ ಪುಟ್ಟ ಬಾಲಕನನ್ನೇ ಪಕ್ಕದ ಮನೆಯ ಅಪ್ರಾಪ್ತ ಅಪಹರಣ ಮಾಡಿ ಆ ಬಾಲಕನ ರುಂಡವನ್ನೇ ಕತ್ತರಿಸಿ ಕೊಲೆ ಮಾಡಿದ್ದಾನೆ.

ಉತ್ತರ ಪ್ರದೇಶದ ಮರಿನ ಇಂಚೋಲಿ ಬಳಿ ಇದ್ದ, ಕಬ್ಬಿನಗದ್ದೆಯಲ್ಲಿ, ಶಿರಚ್ಛೇದನ ಮಾಡಿರುವಂತಹ ಹೆಣವೊಂದು ಪತ್ತೆಯಾಗಿದೆ. ಆ ಮೃತದೇಹವನ್ನು ಪ್ರಾಣಿಗಳು ಕಿತ್ತು ತಿಂದಿದೆ. ಈ ಬಾಲಕ ದೆಹಲಿಯ ಪ್ರಿತ್ ವಿಹಾರ್ ವ್ಯಾಪ್ತಿಯಲ್ಲಿ ಬರುವ ಝಗಿಯ ನಿವಾಸಿ ಹಿರಾಲಾಲ್ ಅವರ ಪುತ್ರ ಮಾನವ್ ಎಂದು ಗುರುತಿಸಲಾಗಿದೆ. ಪೊಲೀಸರ ತನಿಖೆಯಿಂದ ಈತನ ಹತ್ಯೆ ಮಾಡಿರುವುದು ಪಕ್ಕದ ಮನೆಯ ನಿವಾಸಿಯಾಗಿರೋ ದೀಪಕ್ ಎಂದು ಹೇಳಲಾಗುತ್ತಿದೆ.

ಪೊಲೀಸರು ಕೊಟ್ಟ ಮಾಹಿತಿ ಪ್ರಕಾರ ದೀಪಕ್‌, ಪುಟ್ಟ ಬಾಲಕನ ಮೇಲೆ ಲೈಂಗಿಕವಾಗಿ ಪೀಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅದೇ ಉದ್ದೇಶ ಇಟ್ಟುಕೊಂಡು ಬಾಲಕನನ್ನು ಅಪಹರಣ ಮಾಡಲಾಗಿತ್ತು ಎಂದು ಹೇಳಲಾಗಿದೆ. ಆದರೆ ಇನ್ನೂ ಪೋಸ್ಟ್ ಮಾರ್ಟ್‌ಂ ಆಗದೇ ಇರುವುದರಿಂದ ಇದರ ಬಗ್ಗೆ ಅಧಿಕೃತವಾಗಿ ಏನೂ ಹೇಳಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ಅಮೃತಾ ತಿಳಿಸಿದ್ದಾರೆ.

ಮೃತ ದೇಹದ ಬಳಿ ಸಿಕ್ಕಿರುವ ತಲೆ ಹಾಗೂ ಆತನ ಬಟ್ಟೆ ಇವುಗಳ ಆಧಾರದ ಮೇಲೆ ಬಾಲಕ ಯಾರು ಎಂದು ಗುರುತಿಸಲಾಗಿದೆ. ತನಿಖೆ ಸಮಯದಲ್ಲಿ ಆರೋಪಿಯನ್ನು ಕಂಡು ಹಿಡಿಯಲಾಗಿದ್ದು, 16 ವರ್ಷದ ದೀಪಕ್‌ನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ವಿಚಾರಣೆ ವೇಳೆ ಆರೋಪಿ ಈ ಹಿಂದೆ ಅಂದರೆ 11 ವರ್ಷ ವಯಸ್ಸಿನಲ್ಲೂ ಓರ್ವ ಬಾಲಕನ ಜೊತೆ ಇದೇ ರೀತಿ ಲೈಂಗಿಕ ಹಿಂಸೆ ನೀಡಿದ್ದ ಎಂದು ತಾನೇ ಸ್ವತಃ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ ಈ ಬಾರಿ ಬಾಲಕನನ್ನ ಅಪಹರಣ ಮಾಡಿ, ಮೆರಥ್ ಮಾನಾ ಅನ್ನೊ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟು, ಅಲ್ಲೇ ಹತ್ಯೆಗೈದಿದ್ದಾನೆ. ಕೊನೆಗೆ ದೇಹದಿಂದ ತಲೆಯನ್ನು ಕತ್ತರಿಸಿ ಅಲ್ಲೇ ಪಕ್ಕದ ಕಬ್ಬಿನ ಗದ್ದೆಯಲ್ಲಿ ಬಿಸಾಡಿದ್ದಾನೆ.

ಸದ್ಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿ ದೀಪಕ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...