ಶಿವಮೊಗ್ಗ: ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದೇವಗಂಗೆಯಲ್ಲಿ ಮಂಗಳವಾರ ಯಂತ್ರಕ್ಕೆ ಸಿಲುಕಿ ಭತ್ತ ಒಕ್ಕುವಾಗ ರೈತನ ಕೈ ತುಂಡಾದ ದುರ್ಘಟನೆ ನಡೆದಿದೆ.
ದೇವಗಂಗೆಯ ರೈತ ವಿಶ್ವನಾಥ ಇವರ ಬಲಗೈ ಯಂತ್ರಕ್ಕೆ ಸಿಲುಕಿ ಸಂಪೂರ್ಣ ತುಂಡಾಗಿ ಗಂಭೀರವಾಗಿ ಗಾಯಗೊಂಡ ವಿಶ್ವನಾಥರನ್ನು ಮತ್ತು ತುಂಡಾಗಿದ್ದ ಕೈಯನ್ನು ಹಿಡಿದುಕೊಂಡು ಹೊಸನಗರ ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ತುಂಡಾದ ಕೈ ಮರುಜೋಡಣೆ ಅಸಾಧ್ಯ ಎಂದು ವೈದ್ಯರು ಹೇಳಿಕೆ ನೀಡಿದ್ದು, ದೇವಗಂಗೆ ಮಹೇಶಗೌಡ ಅವರ ಜಮೀನಿನಲ್ಲಿ ಭತ್ತ ಒಕ್ಕುವ ಕೆಲಸ ನಡೆಯುತ್ತಿತ್ತು. ವಿಶ್ವನಾಥನು ಸೇರಿದಂತೆ 14 ಜನ ರೈತರು ಕೆಲಸ ನಿರ್ವಹಿಸುತ್ತಿದ್ದರು. ವಿಶ್ವನಾಥ ಬಡ ರೈತನಾಗಿದ್ದು ಬಲಗೈಯನ್ನೇ ಕಳೆದುಕೊಂಡಿದ್ದು ಕುಟುಂಬದಲ್ಲಿ ಆತಂಕ ಉಂಟಾಗಿದೆ.