alex Certify ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಶಾಸ್ತ್ರದ ಪ್ರಕಾರ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಶಾಸ್ತ್ರದ ಪ್ರಕಾರ ಮಾಡಿ ಈ ಕೆಲಸ

ಗ್ರಹ ದೋಷದಿಂದ ಮುಕ್ತಿ ಪಡೆಯಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ಹಣದ ಸಮಸ್ಯೆಯಿಂದ ಹೊರಬರಲೂ ಶಾಸ್ತ್ರದಲ್ಲಿ ಕೆಲವೊಂದು ಮಾರ್ಗಗಳನ್ನು ಹೇಳಲಾಗಿದೆ.

ಮಂಗಳವಾರ ಅಥವಾ ಶನಿವಾರ ಹನುಮಂತನ ದೇವಸ್ಥಾನಕ್ಕೆ ತೆರಳಿ 11 ಕಪ್ಪು ಉದ್ದು, ಸಿಂಧೂರ, ಮಲ್ಲಿಗೆ ಎಣ್ಣೆ, ಹೂ ಹಾಗೂ ಪ್ರಸಾದವನ್ನು ಅರ್ಪಿಸಬೇಕು. ಜೊತೆಗೆ ಸುಂದರ ಕಾಂಡವನ್ನು ಓದಬೇಕು. ಸಮಯದ ಅಭಾವವಿರುವವರು ಹನುಮಾನ್ ಚಾಲೀಸಾ ಓದಬಹುದು.

ಮಂಗಳವಾರ ಅಥವಾ ಶನಿವಾರ ವಿಧಿವಿಧಾನದ ಮೂಲಕ ಹನುಮಂತನ ಪೂಜೆ ಮಾಡುವುದ್ರಿಂದ ಎಲ್ಲ ರೀತಿಯ ಕಷ್ಟ ನಿವಾರಣೆಯಾಗುತ್ತದೆ. ಜಾತಕದಲ್ಲಿರುವ ಶನಿ ಪ್ರಭಾವ ಕೂಡ ಕಡಿಮೆಯಾಗುತ್ತದೆ. ಈ ಉಪಾಯ ಅನುಸರಿಸಿದ ಕೆಲವೇ ದಿನಗಳಲ್ಲಿ ಸಕಾರಾತ್ಮಕ ಪರಿಣಾಮವನ್ನು ನೋಡಬಹುದಾಗಿದೆ. ಪೂಜೆ ವೇಳೆ ಪವಿತ್ರತೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಮನೆಯ ಹಿರಿಯರನ್ನು ಗೌರವಿಸಿ. ಅವರಿಗೆ ನೋವುಂಟು ಮಾಡಬೇಡಿ.

ಪ್ರೇತ – ಭೂತದ ಕಾಟವಿರುವವರು ಶನಿವಾರ ಅಥವಾ ಮಂಗಳವಾರ ಕೆಂಪು ಬಟ್ಟೆಯಲ್ಲಿ ಕುಂಕುಮ, ತಾಮ್ರದ ನಾಣ್ಯ ಹಾಗೂ ಎಳ್ಳನ್ನು ಇಟ್ಟು ಬಟ್ಟೆಯನ್ನು ಕಟ್ಟಿ. ಭೂತದ ಕಾಟಕ್ಕೊಳಗಾಗಿರುವವರಿಗೆ ಈ ಗಂಟನ್ನು ಪ್ರದಕ್ಷಿಣೆ ಮಾಡಿ ದೂರದ ಸ್ಥಳದಲ್ಲಿ ಎಸೆಯಿರಿ. ನಂತ್ರ ಹಿಂತಿರುಗಿ ನೋಡಬೇಡಿ. ಯಾರ ಜೊತೆಯೂ ಮಾತನಾಡಬೇಡಿ.

ಶನಿವಾರ ಅಥವಾ ಮಂಗಳವಾರ ಪವಿತ್ರ ದಾರದಲ್ಲಿ ಮೂರು ಮೆಣಸಿನ ಕಾಯಿ, ಕೊನೆಯಲ್ಲಿ ನಾಲ್ಕು ಮೆಣಸಿನಕಾಯಿ, ಮಧ್ಯೆ ನಿಂಬೆಹಣ್ಣನ್ನು ಕಟ್ಟಿ ಮನೆಯ ಮುಖ್ಯ ದ್ವಾರದಲ್ಲಿ ಕಟ್ಟಿ. ಇದ್ರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...