alex Certify BIG NEWS: ಬಿಜೆಪಿ ನಾಯಕರು ಹೇಳುವುದು ಒಂದು ಮಾಡುವುದು ಒಂದು; ಸಿದ್ದರಾಮಯ್ಯ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿ ನಾಯಕರು ಹೇಳುವುದು ಒಂದು ಮಾಡುವುದು ಒಂದು; ಸಿದ್ದರಾಮಯ್ಯ ಕಿಡಿ

ಶಿವಮೊಗ್ಗ: ರೌಡಿ ಶೀಟರ್ ಗಳು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿ ಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯವರು ಹೇಳುವುದು ಒಂದು ಮಾಡುವುದು ಒಂದು ಎಂದು ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರೌಡಿಗಳ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ. ಎಂಪಿಗಳ ಜೊತೆ ರೌಡಿಶೀಟರ್ ಗಳು ಇರುವಾಗ ಖಾಕಿಗೆ ಹೇಗೆ ಅವನನ್ನು ಹಿಡಿಯಲು ಧೈರ್ಯ ಬರುತ್ತೆ? ಬಿಜೆಪಿಯವರು ಅವನ ಜೊತೆ ಸೇರಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸ್ವತಃ ಎಂಪಿಗಳೇ ಆತನ ಜೊತೆಗಿದ್ದರೆ ಪೊಲೀಸರು ಹೇಗೆ ಅರೆಸ್ಟ್ ಮಾಡುತ್ತಾರೆ? ಕಾನೂನು ಕ್ರಮ ಕೈಗೊಳ್ಳಲು ಆಗುತ್ತಾ? ಬಿಜೆಪಿಯವರು ನೀತಿ ಹೇಳುವುದು ಎಂದರೆ ಇದೇನಾ? ಹೇಳುವುದೊಂದು ಮಾಡುವುದು ಒಂದು ಎಂದು ಗುಡುಗಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...