ನವದೆಹಲಿ: ಹಿಂದೂಗಳ ಹೆಸರಲ್ಲಿ ಸ್ಫೋಟ ನಡೆಸುವ ಯೋಜನೆ ರೂಪಿಸಿದ್ದರು. ಇದನ್ನೇ ಕೆಲ ತಲೆಕೆಟ್ಟ ರಾಜಕಾರಣಿಗಳು ವೋಟ್ ಬ್ಯಾಂಕ್ ಗಾಗಿ ಹಿಂದೂಗಳ ತಲೆಗೆ ಕಟ್ಟುವ ಪ್ರಯತ್ನವನ್ನೂ ಮಾಡಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಹಿಂದೂಗಳ ಗುರುತಿನ ಚೀಟಿ ಇಟ್ಟುಕೊಂಡು ಮಂಗಳೂರು ಸ್ಫೋಟಕ್ಕೆ ಸಂಚು ನಡೆಸಲಾಗಿತ್ತು. ದೇವಾಲಯಗಳನ್ನು ಟಾರ್ಗೆಟ್ ಮಾಡಿದ್ದರು. ಸಧ್ಯ ದೇವರ ದಯೆಯಿಂದ ಇದಾವುದೂ ಸಾಧ್ಯವಾಗಿಲ್ಲ. ದೇವರು ನಮ್ಮ ಕಡೆ ಇದ್ದಾನೆ. ಕೊಯಮತ್ತೂರ್ ಬಳಿಕ ಕರ್ನಾಟಕದಲ್ಲಿಯೂ ಉಗ್ರರ ಸಂಚು ವಿಫಲವಾಗಿದೆ ಎಂದರು.
ಪ್ರಕರಣವನ್ನು ಎನ್ ಐ ಎ ಗೆ ನೀಡುವಂತೆ ನಾನು ಸಿಎಂ ಬಸವರಾಜ್ ಬೊಮ್ಮಾಯಿ ಬಳಿ ಮಾತನಾಡಿದ್ದೇನೆ. ಇದನ್ನು ಲಘುವಾಗಿ ಪರಿಗಣಿಸಬಾರದು. ಇದರ ಹಿಂದೆ ಜಿಹಾದಿ ಮಾನಸಿಕತೆಯಿದೆ. ಸ್ಫೋಟಕ್ಕೆ ಕಚ್ಚಾವಸ್ತುಗಳನ್ನು ಯಾರು ನೀಡುತ್ತಿದ್ದಾರೆ ಎಂಬುದು ಪತ್ತೆಯಾಗಬೇಕು ಎಂದರು.